<p>ಪೆಟ್ರೋಲ್, ಡೀಸೆಲ್, ವಿದ್ಯುತ್, ಅಡುಗೆ ಅನಿಲ... ಇವುಗಳ ಬೆಲೆ ಏರಿಕೆ ಬಿಸಿಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಅಡುಗೆ ಎಣ್ಣೆ ದರ ಏರಿಕೆ ಮತ್ತೊಂದು ಶಾಕ್ ನೀಡಿದೆ. ಈ ವರ್ಷ ಕೋವಿಡ್ ಕಾರಣದಿಂದಾಗಿ ತಾಳೆಎಣ್ಣೆ, ಸೂರ್ಯಕಾಂತಿ ಮೊದಲಾದ ಎಣ್ಣೆಗಳ ಆಮದು ಪ್ರಮಾಣದಲ್ಲಿ ಕುಸಿತವಾಗಿದೆ. ಇದಲ್ಲದೆ ನಮ್ಮ ದೇಶದಲ್ಲಿ ಈ ವರ್ಷ ಅತಿವೃಷ್ಟಿಯಿಂದ ಶೇಂಗಾ, ಸೂರ್ಯಕಾಂತಿ, ಸೋಯಾಬೀನ್, ಸಾಸಿವೆ ಮುಂತಾದ ಎಣ್ಣೆ ಬೆಳೆಗಳಿಗೆ ಹಾನಿಯಾಗಿದೆ.</p>.<p>ಅಡುಗೆ ಎಣ್ಣೆ ದರ ಏರಿಕೆಯು ಶ್ರೀಸಾಮಾನ್ಯ ನಾಗರಿಕರನ್ನು ಹೈರಾಣಾಗಿಸಿದ್ದು, ದರ ನಿಯಂತ್ರಿಸಲು ಆಮದು ಸುಂಕ ಕಡಿಮೆ ಮಾಡಬೇಕು. ಕಾಲಕಾಲಕ್ಕೆ ಆಮದು ಉತ್ಪನ್ನಗಳ ದರ ಏರಿದಾಗ ಅದೇ ಪ್ರಮಾಣದಲ್ಲಿ ಸುಂಕ ಕಡಿಮೆ ಮಾಡಿ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಆಮದು ಪ್ರಮಾಣ ಕಡಿಮೆಯಾಗಲು ನಮ್ಮ ದೇಶದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಎಣ್ಣೆ ಬೆಳೆ ಬೆಳೆಯುವ ರೈತರಿಗೆ ಪ್ರೋತ್ಸಾಹಧನ, ಹೆಚ್ಚು ಇಳುವರಿಗಾಗಿ ವೈಜ್ಞಾನಿಕ ಮಾರ್ಗದರ್ಶನ, ಸಲಕರಣೆ ಒದಗಿಸಬೇಕು.</p>.<p><em><strong>– ಉದಯ ಮ. ಯಂಡಿಗೇರಿ,ಧಾರವಾಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೆಟ್ರೋಲ್, ಡೀಸೆಲ್, ವಿದ್ಯುತ್, ಅಡುಗೆ ಅನಿಲ... ಇವುಗಳ ಬೆಲೆ ಏರಿಕೆ ಬಿಸಿಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಅಡುಗೆ ಎಣ್ಣೆ ದರ ಏರಿಕೆ ಮತ್ತೊಂದು ಶಾಕ್ ನೀಡಿದೆ. ಈ ವರ್ಷ ಕೋವಿಡ್ ಕಾರಣದಿಂದಾಗಿ ತಾಳೆಎಣ್ಣೆ, ಸೂರ್ಯಕಾಂತಿ ಮೊದಲಾದ ಎಣ್ಣೆಗಳ ಆಮದು ಪ್ರಮಾಣದಲ್ಲಿ ಕುಸಿತವಾಗಿದೆ. ಇದಲ್ಲದೆ ನಮ್ಮ ದೇಶದಲ್ಲಿ ಈ ವರ್ಷ ಅತಿವೃಷ್ಟಿಯಿಂದ ಶೇಂಗಾ, ಸೂರ್ಯಕಾಂತಿ, ಸೋಯಾಬೀನ್, ಸಾಸಿವೆ ಮುಂತಾದ ಎಣ್ಣೆ ಬೆಳೆಗಳಿಗೆ ಹಾನಿಯಾಗಿದೆ.</p>.<p>ಅಡುಗೆ ಎಣ್ಣೆ ದರ ಏರಿಕೆಯು ಶ್ರೀಸಾಮಾನ್ಯ ನಾಗರಿಕರನ್ನು ಹೈರಾಣಾಗಿಸಿದ್ದು, ದರ ನಿಯಂತ್ರಿಸಲು ಆಮದು ಸುಂಕ ಕಡಿಮೆ ಮಾಡಬೇಕು. ಕಾಲಕಾಲಕ್ಕೆ ಆಮದು ಉತ್ಪನ್ನಗಳ ದರ ಏರಿದಾಗ ಅದೇ ಪ್ರಮಾಣದಲ್ಲಿ ಸುಂಕ ಕಡಿಮೆ ಮಾಡಿ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಆಮದು ಪ್ರಮಾಣ ಕಡಿಮೆಯಾಗಲು ನಮ್ಮ ದೇಶದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಎಣ್ಣೆ ಬೆಳೆ ಬೆಳೆಯುವ ರೈತರಿಗೆ ಪ್ರೋತ್ಸಾಹಧನ, ಹೆಚ್ಚು ಇಳುವರಿಗಾಗಿ ವೈಜ್ಞಾನಿಕ ಮಾರ್ಗದರ್ಶನ, ಸಲಕರಣೆ ಒದಗಿಸಬೇಕು.</p>.<p><em><strong>– ಉದಯ ಮ. ಯಂಡಿಗೇರಿ,ಧಾರವಾಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>