ಸರ್ಕಾರ ವಿಧಿಸುವ ನಿರ್ಬಂಧಗಳು, ನಿಯಮಗಳನ್ನು ನಾಗರಿಕರು ಪಾಲಿಸುತ್ತಾ ಬಂದಿದ್ದಾರೆ. ಈಗ ನಿರ್ಬಂಧಗಳನ್ನು ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿ ಕೆಲವು ವಲಯಗಳನ್ನು ಬಿಟ್ಟರೆ ಭಾಗಶಃ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ನಾಗರಿಕರು ಕೂಡ ಈಗ ಜಾಗೃತರಾಗಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಉಪಯೋಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಲಾದರೂ ಕೊರೊನಾ ಕಾಲರ್ಟ್ಯೂನ್ ಕಿರಿಕಿರಿ ನಿಲ್ಲಿಸಿ, ಮೊಬೈಲ್ ಬಳಕೆದಾರರಿಗೆ ಇರುಸುಮುರುಸು ತಪ್ಪಿಸಲಿ.