ಕೋವಿಡ್ ಕಾರಣದಿಂದ ವಿಧಿಸಿರುವ ಲಾಕ್ಡೌನ್ ವಿಸ್ತರಣೆಯಾಗುವಂತೆ ಕಾಣುತ್ತಿದೆ. ಇಂತಹ ಕ್ಲಿಷ್ಟಕರ ವಾತಾವರಣದಲ್ಲಿ ರಂಗಭೂಮಿ, ಚಲನಚಿತ್ರ, ಕಿರುತೆರೆ, ಜಾನಪದ, ಆರ್ಕೆಸ್ಟ್ರಾ, ಮ್ಯಾಜಿಕ್ ಸೇರಿದಂತೆ ವಿವಿಧ ಕಲಾಪ್ರಕಾರಗಳ ಕಲಾವಿದರ ವರಮಾನ ನಿಂತುಹೋಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತೀ ಜಿಲ್ಲೆಗೂ ಸಾಂಸ್ಕೃತಿಕ ಸಾಂತ್ವನ ಕೇಂದ್ರ ಸ್ಥಾಪಿಸಬೇಕು. ಈ ಮೂಲಕ ಕೋವಿಡ್ ತಪಾಸಣೆ, ಲಸಿಕೆ ನೀಡುವಿಕೆ, ಆದ್ಯತೆ ಮೇರೆಗೆ ರೇಷನ್ ವಿತರಣೆಯಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.