ರಾಜ್ಯದ ಹಲವೆಡೆ ಜನದಟ್ಟಣೆಯ ಪ್ರದೇಶಗಳಲ್ಲಿ ಸಾವಿಗೆ ಆಹ್ವಾನ ನೀಡುವಂತಹ ಜೋಡಿ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳು, ಮನೆಯ ಕಿಟಕಿ, ಬಾಗಿಲುಗಳಿಂದ ಕೈ ಹೊರಚಾಚಿದರೂ ತಗಲುವಂತಹ ವಿದ್ಯುತ್ ಲೈನ್ಗಳು ತೀವ್ರ ಆತಂಕ ಹುಟ್ಟಿಸುವಂತಿವೆ. ಸಾವು ನೋವಿನ ಘಟನೆ ವರದಿಯಾದ ಸಂದರ್ಭದಲ್ಲಿ ತನಿಖೆಯ ಹೆಸರಿನಲ್ಲಿ ಕಾಲಹರಣ ಮಾಡುವ ಬದಲು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದುದು ಅತ್ಯಗತ್ಯ.