ಜಾತಿ ಆಧಾರಿತ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ಶುರುವಾಗಿರುವುದು ದುರಂತವೇ ಸರಿ. ಆದರೆ ಈ ಚರ್ಚೆ ಮೊದಲು ಶುರುವಾಗಿದ್ದು ರಾಜ್ಯದ ಪ್ರಬಲ ಜಾತಿಗಳ ಮುಖಂಡರು ಮತ್ತು ಪಾರ್ಟ್ ಟೈಮ್ ಮಠಾಧೀಶ ರಾಜಕಾರಣಿಗಳಿಂದ. ಆದ್ದರಿಂದ ಪ್ರಸ್ತುತ ತಳ ಸಮುದಾಯಗಳಿಂದಲೂ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಬಂದಿರುವುದು ಸಹಜ ಮತ್ತು ಅಗತ್ಯ ಕೂಡ. ಆದರೆ ವಿಚಿತ್ರವೆಂದರೆ ಸಂಖ್ಯಾಬಲವೇ ಇಲ್ಲದಿರುವ, ಅಧಿಕಾರದಿಂದ ದೂರವಿರುವ ಪಕ್ಷದಿಂದ ದಲಿತ ಮುಖ್ಯಮಂತ್ರಿಯಾಗಬೇಕು ಎಂದು ಚರ್ಚೆ ಶುರುವಾಗಿರುವುದು. ಕಾಂಗ್ರೆಸ್ನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಪ್ರಬಲ ಮುತ್ಸದ್ದಿ ದಲಿತ ರಾಜಕಾರಣಿಗಳು ಇದ್ದಾರೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಈಗ ಆಡಳಿತ ನಡೆಸುತ್ತಿರುವ ಬಿಜೆಪಿಯಲ್ಲಿ ದಲಿತ ನಾಯಕರು ಇಲ್ಲವೇ?