ವಾಚಕರ ವಾಣಿ: ‘ಮಹಾನ್ ದಾನ’ಕ್ಕೆ ಎಣೆಯಿಲ್ಲ
ಇತ್ತೀಚೆಗೆ ನಿಧನರಾದ ನಿವೃತ್ತ ಡಿಜಿಪಿ ಪಿ.ಜಿ.ಹರ್ಲಂಕರ್ ಅವರ ಇಚ್ಛೆಯಂತೆ ಕುಟುಂಬದವರು ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಗೆ ದಾನ ಮಾಡಿದ್ದನ್ನು ತಿಳಿದು, ಆ ಕುಟುಂಬದವರ ಮೇಲೆ ಅಭಿಮಾನ ಮೂಡಿತು. ಈ ಹಿಂದೆಯೂ ಅನೇಕ ಖ್ಯಾತನಾಮರು ಶರೀರ ದಾನ ಮಾಡಿ ಅಮರರಾಗಿರುವ ನಿದರ್ಶನಗಳಿವೆ.
ತಜ್ಞ ವೈದ್ಯರ ಅಭಿಪ್ರಾಯದಂತೆ, ಮೃತ ಶರೀರದ ಅಂಗಾಂಗಗಳು, ಕಲಿಕೆಯ ಹಂತದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳ ಪ್ರತ್ಯಕ್ಷ ಅಧ್ಯಯನ ಹಾಗೂ ಸಂಶೋಧನೆಗೆ ಬಹಳಷ್ಟು ಸಹಕಾರಿಯಾಗಬಲ್ಲವು. ಮಣ್ಣಲ್ಲಿ ಮಣ್ಣಾಗುವ ಈ ಮೃತ ಶರೀರದಿಂದ ಅಸಂಖ್ಯಾತ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವುದಾದರೆ, ಅದಕ್ಕಿಂತ ‘ಮಹಾನ್ ದಾನ’ ಬೇರೆ ಯಾವುದಿದೆ?
-ಜಿ.ರಾಜಣ್ಣ, ದಾವಣಗೆರೆ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.