ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಸುಮಾರು 75ಕ್ಕೂ ಹೆಚ್ಚು ಅಧಿಕಾರಿಗಳಿಗೆ ನೆನಪೋಲೆ ಕಳಿಸಿದ್ದು, ಯಾರೊಬ್ಬರೂ ಉತ್ತರಿದೆ ಕಸದ ಬುಟ್ಟಿಗೆ ಹಾಕಿದ್ದಾರಂತೆ. ಅವರ ಮೇಲಧಿಕಾರಿಗಳಿಗೆ ಹೇಳಿದರೆ ಅವರೂ ಕಿವಿಗೆ ಹಾಕಿಕೊಂಡಿಲ್ಲವಂತೆ. ಇದಕ್ಕೂ ಮೀರಿ ಹೆಚ್ಚಿನ ಅಧಿಕಾರವಿಲ್ಲದ ಪ್ರಾಧಿಕಾರ ಅಸಹಾಯಕವಾಗಿದೆ. ಸರ್ಕಾರವು ಸುಗ್ರೀವಾಜ್ಞೆಯ ಮೂಲಕ, ಪ್ರಾಧಿಕಾರಕ್ಕೆ ಲಕ್ಷಗಟ್ಟಲೆ ದಂಡ ವಿಧಿಸುವ ಅಧಿಕಾರ ನೀಡಿ ಕನ್ನಡದ ಅಸ್ಮಿತೆಯನ್ನು ಉಳಿಸಬೇಕು.