ಪವಿತ್ರ ಆರ್ಥಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ರಾಕ್ಷಸ ಆರ್ಥಿಕತೆಯನ್ನು ಮಣಿಸುವಂತೆ ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆಶಯವು ತಕ್ಷಣದ ಅವಶ್ಯಕತೆಯಾಗಿದೆ. ‘ಇದಕ್ಕೆ ನನ್ನದೂ ಬೆಂಬಲವಿದೆ’ ಎಂದು ಸರಣಿಯಾಗಿ ಹಲವರು ಹೇಳುತ್ತಿದ್ದಾರೆ. ಹಾಗಾದರೆ ಬೆಂಬಲ ಸೂಚಿಸಲು ಸಾಮಾನ್ಯರಾದ ನಾವೇನು ಮಾಡಬಹುದು? ನಾವೇನೂ ಉಪವಾಸ ಮಾಡುವುದು ಬೇಡ. ಮಾರುಕಟ್ಟೆ ತಂತ್ರಗಳಾದ ಜಾಹೀರಾತು, ಪ್ರಚಾರ, ಬಣ್ಣಗಳ ಆಕರ್ಷಣೆಗೆ ಮಾರುಹೋಗದೆ, ನಮ್ಮ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ವಸ್ತುಗಳನ್ನು ಕೊಳ್ಳಬೇಕು. ಇದರಿಂದ ರಾಕ್ಷಸ ಆರ್ಥಿಕತೆ ಅರ್ಧ ಸತ್ತಂತೆ.