ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಣಾ ಮನೋಭಾವ ಇಂದಿನ ಅಗತ್ಯ

ಅಕ್ಷರ ಗಾತ್ರ

ಶಿಕ್ಷಕರಿಗೆ ಜ್ಞಾನದ ಹಸಿವು ಇರಬೇಕು ಎಂಬ ಡಾ. ಜ್ಯೋತಿ ಅವರ ಲೇಖನ (ಸಂಗತ, ಅ. 6) ಸಮಾಜದ ಮುಖ್ಯ ಆಧಾರಸ್ತಂಭದಂತಿರುವ ಶಿಕ್ಷಕ ಸಮೂಹ ಮತ್ತೆ ಮತ್ತೆ ಪುನರಾವಲೋಕನ ಮಾಡಿಕೊಳ್ಳಲು ಬೆಳಕಿಂಡಿಯಂತೆ ಇದೆ. ಮಾನವ ಜನಾಂಗದ ಉದ್ಧಾರಕ್ಕೆ ಶಿಕ್ಷಣವೇ ಭದ್ರ ಬುನಾದಿ. ಈ ಬುನಾದಿ ಗಟ್ಟಿಯಾಗಿ ನಿರ್ಮಾಣವಾಗಬೇಕಾದರೆ ಉತ್ತಮ ವ್ಯಕ್ತಿತ್ವದಿಂದ ಕೂಡಿದ ಜ್ಞಾನವಂತ ಶಿಕ್ಷಕ ಸಮೂಹವು ಸಮರ್ಪಣಾ ಮನೋಭಾವದಿಂದ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪರಂಪರೆಯಿಂದ ಆಚಾರ್ಯ, ಗುರು ಎಂಬ ಅಭಿದಾನ ಹೊಂದಿರುವ ಇಂದಿನ ಶಿಕ್ಷಕ, ಅಧ್ಯಾಪಕ ಅಥವಾ ಪ್ರಾಧ್ಯಾಪಕರು ಪೂರ್ವಸಿದ್ಧತೆಯೊಂದಿಗೆ, ನಿರಂತರ ಅಧ್ಯಯನದೊಂದಿಗೆ ಜ್ಞಾನವನ್ನು ವೃದ್ಧಿಸಿಕೊಂಡು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಬೋಧನೆಯನ್ನು ಮಾಡಬೇಕು. ಆಗ ನಿಜಕ್ಕೂ ಉತ್ತಮ ಭವಿಷ್ಯ ನಿರೀಕ್ಷಿಸಬಹುದು.

- ಸಂಜೀವಕುಮಾರ ಅತಿವಾಳೆ,ಬೀದರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT