ಮಾನವನ ಅತಿ ದುರಾಸೆಯಿಂದ ಅರಣ್ಯ ಪ್ರದೇಶ ಆಕ್ರಮಣ, ಕಾಡುಗಳ್ಳತನದಂತಹ ಕೃತ್ಯಗಳಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ, ಅರಣ್ಯದಲ್ಲಿ ಸ್ವತಂತ್ರವಾಗಿದ್ದ ಪ್ರಾಣಿಗಳು ಆಹಾರ, ನೀರು ಅರಸಿ ವಲಸೆ ಹೋಗುವ ಪ್ರಸಂಗ ಬಂದಿದೆ. ಸರ್ಕಾರದ ಸೂಚನಾ ಫಲಕಗಳು ಇದ್ದರೂ ಅವನ್ನು ಕಡೆಗಣಿಸಲಾಗುತ್ತಿದೆ. ಜನ ಮೃಗೀಯವಾಗಿ ವರ್ತಿಸದೆ, ಕಾನೂನಿಗೆ ತಲೆಬಾಗಿ ಮನುಷ್ಯತ್ವವನ್ನು ಪಾಲಿಸುವರೇ?