ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕರ ವಿರುದ್ಧ ನಕಲಿ ದೂರು

Last Updated 4 ಸೆಪ್ಟೆಂಬರ್ 2019, 18:06 IST
ಅಕ್ಷರ ಗಾತ್ರ

ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಚಪಾತಿ ಜೊತೆಗೆ ನೆಂಚಿಕೊಳ್ಳಲು ಪಲ್ಯದ ಬದಲಿಗೆ ಉಪ್ಪನ್ನು ನೀಡಿದ್ದರ ಬಗ್ಗೆ ವಿಡಿಯೊ ಮಾಡಿ ಸತ್ಯವನ್ನು ಬಯಲಿಗೆಳೆದಿದ್ದ ಪತ್ರಕರ್ತನ ವಿರುದ್ಧ ಉತ್ತರಪ್ರದೇಶದ ಮಿರ್ಜಾಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದು (ಪ್ರ.ವಾ., ಸೆ. 4) ಖಂಡನೀಯ.

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್ ಕುಮಾರ್‌ ಅವರು ಹೇಳುವ ಹಾಗೆ, ಇರುವ ಸುದ್ದಿಯನ್ನು ತಿರುಚುವ, ಉತ್ಪ್ರೇಕ್ಷಿಸುವ, ಸುಳ್ಳನ್ನು ನಿಜವೆಂದುಅತಿರಂಜಿತವಾಗಿ ಬಿತ್ತರಿಸುವ ಕೆಲವು ಮಾಧ್ಯಮಗಳು, ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳು ಆಳುವ ಸತ್ತೆಯ ಪರವಾಗಿ ಹಲವು ವರ್ಷಗಳಿಂದಲೂ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇಂತಹ ಸ್ಥಿತಿಯಲ್ಲೂ ಪ್ರಾಮಾಣಿಕ ಪತ್ರಕರ್ತರಿಂದ ನೈಜ ಸುದ್ದಿಗಳು ಹೊರಬರುತ್ತಿವೆ. ಆದರೆ ಅಂತಹವರ ವಿರುದ್ಧ ನಕಲಿ ದೂರು ದಾಖಲಿಸಿ ಅವರ ಬಾಯಿ ಮುಚ್ಚಿಸುವುದರ ವಿರುದ್ಧ ಜನಸಾಮಾನ್ಯರು ಈಗಲಾದರೂ ಎಚ್ಚೆತ್ತು ಪ್ರತಿಭಟಿಸಬೇಕು.

ಚಂದ್ರಪ್ರಭ ಕಠಾರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT