ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್ ಕುಮಾರ್ ಅವರು ಹೇಳುವ ಹಾಗೆ, ಇರುವ ಸುದ್ದಿಯನ್ನು ತಿರುಚುವ, ಉತ್ಪ್ರೇಕ್ಷಿಸುವ, ಸುಳ್ಳನ್ನು ನಿಜವೆಂದುಅತಿರಂಜಿತವಾಗಿ ಬಿತ್ತರಿಸುವ ಕೆಲವು ಮಾಧ್ಯಮಗಳು, ವಾಟ್ಸ್ಆ್ಯಪ್ ಯೂನಿವರ್ಸಿಟಿಗಳು ಆಳುವ ಸತ್ತೆಯ ಪರವಾಗಿ ಹಲವು ವರ್ಷಗಳಿಂದಲೂ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇಂತಹ ಸ್ಥಿತಿಯಲ್ಲೂ ಪ್ರಾಮಾಣಿಕ ಪತ್ರಕರ್ತರಿಂದ ನೈಜ ಸುದ್ದಿಗಳು ಹೊರಬರುತ್ತಿವೆ. ಆದರೆ ಅಂತಹವರ ವಿರುದ್ಧ ನಕಲಿ ದೂರು ದಾಖಲಿಸಿ ಅವರ ಬಾಯಿ ಮುಚ್ಚಿಸುವುದರ ವಿರುದ್ಧ ಜನಸಾಮಾನ್ಯರು ಈಗಲಾದರೂ ಎಚ್ಚೆತ್ತು ಪ್ರತಿಭಟಿಸಬೇಕು.