ಕಾರು ಕಳೆದುಕೊಂಡವರಿಗೆ ವಿಮೆ ದೊರಕಬಹುದು. ಆದರೆ, ಬಂಡೀಪುರದಲ್ಲಿ ಅಮೂಲ್ಯ ವನ್ಯಸಂಪತ್ತು ನಾಶವಾಗಿದ್ದನ್ನು ಬಿಸಿಕೊಡುವವರು ಯಾರು? ಇದರಲ್ಲಿ ಎಷ್ಟೋ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿರಬಹುದು. ಇದಕ್ಕೆ ಯಾವ ಪರಿಹಾರವಿದೆ? ಕೆಲವು ವರದಿಗಳು ಹೇಳುವಂತೆ, ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರ ನಡುವಿನ ಸ೦ಘರ್ಷದ ಕಾರಣಕ್ಕೆ ಇದು ನಡೆದಿದ್ದರೆ ನಿಜಕ್ಕೂ ದುರದೃಷ್ಟಕರ. ಈ ಎರಡು ಪ್ರಕರಣಗಳಿಗೂ ಮೂಲ ಕಾರಣವನ್ನು ಆದಷ್ಟು ಬೇಗ ಪತ್ತೆ ಮಾಡಿ, ಮುಂದೆ ಇಂತಹವು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.