ಪ್ರತಿದಿನ ಸಂಗ್ರಹಿಸುವ ಟನ್ಗಟ್ಟಲೆ ಕಸವನ್ನು ಹಸಿ ಕಸ, ಒಣ ಕಸವನ್ನಾಗಿ ವಿಂಗಡಣೆ ಮಾಡಲು ಪೌರ ಕಾರ್ಮಿಕರಿಂದ ಸಾಧ್ಯವಿಲ್ಲ. ಆ ರಾಶಿಯನ್ನು ಮರುಬಳಕೆ ಮಾಡಲು ತೋಚದೆ ಊರ ಹೊರಗೆ ಗುಡ್ಡೆ ಹಾಕುತ್ತಾರೆ. ನಾವು ಪ್ರತಿಯೊಬ್ಬರೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಟ್ಟರೆ, ಗೊಬ್ಬರಕ್ಕೆ, ಮರುಬಳಕೆಗೆ ಮಾದರಿಯಾಗುವಂತಹ ನಾಡು ನಮ್ಮದಾಗುತ್ತದೆ.