ನಮ್ಮ ರಾಜ್ಯದ ನದಿಗಳಲ್ಲೂ ದೋಣಿ, ತೆಪ್ಪ ಮುಳುಗಿ ಜನರು ಸಾವನ್ನಪ್ಪಿದ ದುರಂತಗಳು ನಡೆದಿವೆ. ಕೆಲವು
ಪ್ರದೇಶಗಳಲ್ಲಿ ಜನರು ಸಂಚಾರಕ್ಕಾಗಿ ದೋಣಿ, ತೆಪ್ಪಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಇದೆ. ಮಳೆಗಾಲದಲ್ಲಿ ನದಿಯ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುವುದು ಇದಕ್ಕೊಂದು ಕಾರಣವಿರಬಹುದು. ಇಂತಹ ಸಂದರ್ಭಗಳಲ್ಲಿ ಸರ್ಕಾರವು ಸ್ಥಳೀಯ ಪಂಚಾಯಿತಿಗಳ ಮೂಲಕ ಜೀವರಕ್ಷಕ ಸಾಧನಗಳನ್ನು ಒದಗಿಸಿ, ದೋಣಿ ಮತ್ತು ತೆಪ್ಪಗಳನ್ನು ನಡೆಸುವವರು ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು.