ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಮಿಡಿ ಗ್ರಾಮ: ಅಲಕ್ಷ್ಯ ಸಲ್ಲ

Last Updated 19 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕನ್ನಡದ ಮೊದಲ ಶಾಸನ ಸಿಕ್ಕ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಸಿಕ್ಕ ಮೂಲ ಶಾಸನವನ್ನು ಬೆಂಗಳೂರಿನ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದ್ದು, ಅದರ ಸ್ಮಾರಕವಾಗಿ ಅಲ್ಲಿ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ.

ಹಾಸನ- ಚಿಕ್ಕಮಗಳೂರು ಹೆದ್ದಾರಿಯಲ್ಲಿ, ಬೇಲೂರು ಮತ್ತು ಚಿಕ್ಕಮಗಳೂರಿನ ಮಧ್ಯೆ ಇರುವ ಹೆದ್ದಾರಿಯಿಂದ 4 ಕಿ.ಮೀ. ಒಳಗೆ ಇರುವ ಹಲ್ಮಿಡಿಗೆ ಹೋಗುವ ರಸ್ತೆ ಪ್ರವೇಶ ದ್ವಾರದಲ್ಲಿ ದೊಡ್ಡ ಕಮಾನು ಇದೆ. ಆದರೂ ಮಧ್ಯೆ ಮಧ್ಯೆ ಮಾರ್ಗಸೂಚಿ ಫಲಕಗಳಿಲ್ಲ. ಹಲ್ಮಿಡಿ ಊರಿನಲ್ಲಿಯೂ ಶಿಲಾಶಾಸನ ಇರುವ ಸ್ಥಳದ ಬಗ್ಗೆ ಸೂಚನಾ ಫಲಕಗಳಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನದಿಂದ ಶಿಲಾಶಾಸನದ ಪ್ರತಿಕೃತಿ ಮತ್ತು ಇತರ ಶಿಲ್ಪಗಳನ್ನು ಜತನವಾಗಿ ಕಾಯ್ದಿಡಲಾಗಿದೆ. ಅಲ್ಲಿಂದ ಅಂಬಲಿ ಮಾರ್ಗವಾಗಿ ಚಿಕ್ಕಮಗಳೂರು ಬರೀ ಹತ್ತು ಕಿ.ಮೀ. ದೂರ ಇದ್ದರೂ ರಸ್ತೆ ತೀರಾ ಹದಗೆಟ್ಟಿರುವುದರಿಂದ ಅಲ್ಲಿಗೆ ತಲುಪಲು ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ.

ಕಾರಿನಲ್ಲಿ ಹೋಗುವುದಿರಲಿ ದ್ವಿಚಕ್ರ ವಾಹನದಲ್ಲಿ ಹೋಗುವುದೂ ದುಸ್ತರ. ಇತಿಹಾಸ ಪ್ರಸಿದ್ಧ ಹಲ್ಮಿಡಿ ಸಂಪರ್ಕ ರಸ್ತೆಯ ಈ ಶೋಚನೀಯ ಸ್ಥಿತಿ ದುರದೃಷ್ಟಕರ. ಸಂಬಂಧಿಸಿದ ಇಲಾಖೆ ಕೂಡಲೇ ಇತ್ತ ಗಮನಹರಿಸಿ ಈ ನ್ಯೂನತೆ ಸರಿಪಡಿಸಬೇಕು.

-ಪ್ರೊ. ಎಸ್.ಬಿ.ರಂಗನಾಥ್‌,ಸಿರಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT