ರಂಜಾನ್ ಮಾಸ ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ನಾವು, ಕೊರೊನಾದಿಂದ ಸಂಕಷ್ಟದಲ್ಲಿರುವವರನ್ನು ರಕ್ಷಿಸುವಂತೆ ಮತ್ತು ಕೊರೊನಾ ಸೋಂಕು ನಿರ್ನಾಮ ಮಾಡುವಂತೆ ದೇವರನ್ನು ಬೇಡಿಕೊಳ್ಳೋಣ. ಹೊಸ ಬಟ್ಟೆ ಖರೀದಿಸದೆ ಹಬ್ಬವನ್ನು ಸರಳವಾಗಿ ಆಚರಿಸೋಣ. ಅದೇ ಹಣದಿಂದ ಜಾತಿ, ಧರ್ಮವನ್ನು ನೋಡದೆ ಬಡವರಿಗೆ ಸಹಾಯ ಮಾಡೋಣ. ಈಗಾಗಲೇ ಎಷ್ಟೋ ದಾನಿಗಳು ಸಹಾಯ ಮಾಡಿರುವುದು ಶ್ಲಾಘನೀಯ. ಇದುವೇ ಮಾನವೀಯ ನಡೆ.