ಮೈಸೂರಿನಲ್ಲಿ ಡಿಸೆಂಬರ್ 15, 16 ರಂದು ನಡೆಯಲಿರುವ ಬ್ರಾಹ್ಮಣ ಸಮಾವೇಶದ ಪ್ರಚಾರ ಬಿರುಸಿನಿಂದ ನಡೆದಿದೆ. ಪೇಜಾವರ ಶ್ರೀಗಳು ‘ಹಿಂದೂ ಮತ’ ಎಂಬುದು ವಾಸ್ತವ ಎಂದು ನಂಬಿದ್ದಾರೆ. ವೈದಿಕರು ವೈದಿಕ ಮತವನ್ನು ಅನುಸರಿಸುತ್ತಾರೆಂಬುದು ಜನರ ಭಾವನೆ. ಈಗ ಬ್ರಾಹ್ಮಣ ಜಾತಿಯವರು ತಮ್ಮ ಅಸ್ತಿತ್ವವನ್ನು ತೋರಿಸುತ್ತಿದ್ದಾರೆ. ‘ನಾವೆಲ್ಲ ಒಂದು ನಾವೆಲ್ಲ ಹಿಂದೂ’ ಎಂಬುದು ಘೋಷಣೆ ಮಾತ್ರವಾಗಿದೆ. ಯಾರನ್ನಾದರೂ ಮಾತನಾಡಿಸಿದರೆ ನಾನು ಬ್ರಾಹ್ಮಣ, ನಾನು ಲಿಂಗಾಯತ, ನಾನು ಕುರುಬ ಇತ್ಯಾದಿ ಉತ್ತರ ಬರುತ್ತದೆಯೇ ವಿನಾ ‘ನಾನು ಹಿಂದೂ’ ಎಂಬ ಉತ್ತರ ಬರುವುದಿಲ್ಲ. ಇತರರು ನಾನು ಜೈನ, ನಾನು ಸಿಖ್, ನಾನು ಮುಸಲ್ಮಾನ, ನಾನು ಕ್ರೈಸ್ತ ಎನ್ನುತ್ತಾರೆ. ಹೀಗಿರುವಾಗ ಪೇಜಾವರರಂಥವರು ‘ಹಿಂದೂ ಮತ ಇದೆ’ ಎಂದು ಹೇಗೆ ಹೇಳುತ್ತಾರೆ?