ತುರ್ತುಪರಿಸ್ಥಿತಿ ವಿರೋಧಿಸಿ ಕೊಚ್ಚಿನ್ನಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ್ ಮತ್ತು ನಾನು ಭಾಗವಹಿಸಿದ್ದೆವು. ಅದರ ಉದ್ಘಾಟನೆ ನಮ್ಮ ಶಿವರಾಮ ಕಾರಂತರು, ಅಧ್ಯಕ್ಷತೆ
ಇ.ಎಂ.ಎಸ್.ನಂಬೂದಿರಿಪಾಡ್ ಅವರದ್ದು. ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟಿಗೆ ಸಂಬಂಧಿಸಿದ್ದೂ ಸೇರಿದಂತೆ ಎಷ್ಟೊಂದು ಶ್ರೀಮಂತ ನೆನಪುಗಳಿಗೆ ಸಿದ್ಧಲಿಂಗಯ್ಯ ಕಾರಣಕರ್ತರಾದರು. ಆತ ನಮ್ಮ ನಡುವಿನ ಅಪೂರ್ವ ಭಾಷಣಕಾರರಾಗಿದ್ದರು. ಅವರ ಮಾತಿನ ವ್ಯಂಗ್ಯ ಹಾಗೂ ಹಾಸ್ಯಪ್ರಜ್ಞೆ ಚೇತೋಹಾರಿಯಾಗಿರುತ್ತಿದ್ದವು. ಇಂತಹ ಮಹತ್ವದ ಗೆಳೆಯನಿಗೆ ಯಾವ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸುವುದು?⇒