ಈಗಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಿ, ನಾಡಪ್ರಭು ಕೆಂಪೇಗೌಡರ ಹೆಸರಿಡಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲು ಚಿಂತಿಸಲಾಗಿದೆ ಎಂಬ ಬೆಂಗಳೂರಿನ ಉಪ ಮೇಯರ್ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ.
ಯಾವುದೇ ಯೋಜನೆ ಬಡವರ ಪರ ಇದ್ದರೆ, ಅಧಿಕಾರದಲ್ಲಿ ಇರುವವರು ಅದರ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಅದು ಬಿಟ್ಟು, ಹೆಸರು ಬದಲಿಸಿದಾಕ್ಷಣ ಅದರ ಗುಣಮಟ್ಟ ಹೆಚ್ಚಾಗಬಹುದು ಎಂದುಕೊಳ್ಳುವುದು ಮೂರ್ಖತನವಾಗುತ್ತದೆ.