ಇನ್ನು ಮಸಿ ಬಳಿದ ವಕೀಲೆ ಒಬ್ಬ ಸಾಮಾನ್ಯ ಮಹಿಳೆಯಾಗಿದ್ದರೆ, ಭಾವೋದ್ರೇಕಕ್ಕೆ ಒಳಗಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದುಕೊಳ್ಳಬಹುದಿತ್ತು. ಆದರೆ ಒಬ್ಬ ನ್ಯಾಯವಾದಿಯಾಗಿ, ಅದರಲ್ಲೂ ಕಪ್ಪು ಕೋಟನ್ನು ಧರಿಸಿ ನ್ಯಾಯಾಲಯದ ಆವರಣದಲ್ಲಿಯೇ ಇಂತಹ ಕೃತ್ಯ ಎಸಗಿದ್ದು ಅವರ ವೃತ್ತಿ ಮತ್ತು ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ. ಅವರ ವಿರುದ್ಧ ಹೈಕೋರ್ಟ್ ಸೂಕ್ತ ಕ್ರಮ ಕೈಗೊಂಡು ಸಾಂವಿಧಾನಿಕ ಘನತೆಯನ್ನು ಕಾಪಾಡಬೇಕು. ಒಟ್ಟಿನಲ್ಲಿ ಧರ್ಮಗಳ ವಿಷಯಕ್ಕೆ ಬಡಿದಾಡಿಕೊಳ್ಳುವುದಕ್ಕಿಂತ, ನಮ್ಮೊಳಗಿನ ಅಧರ್ಮದ ವಿರುದ್ಧ ಹೋರಾಡಿದರೆ ಅದಕ್ಕೊಂದು ಸಾರ್ಥಕತೆ ಸಿಗುತ್ತದೆ. ಮನುಷ್ಯನಿಗೆ ಮನುಷ್ಯತ್ವಕ್ಕಿಂತ ದೊಡ್ಡದಾದದ್ದು ಬೇರೇನೂ ಇಲ್ಲ.