ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾನಂದಕರ ಆಗಿರಲಿ

Last Updated 14 ಮೇ 2019, 20:15 IST
ಅಕ್ಷರ ಗಾತ್ರ

ಆಕಾಶವಾಣಿಯಲ್ಲಿ ಈ ಹಿಂದೆ ರಣಜಿ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯನ್ನು ಕೇಳಿದಾಗ, ನಾವು ಸ್ವತಃ ಕ್ರಿಕೆಟ್ ನೋಡಲು ಹೋದರೂ ಸಿಗದಷ್ಟು ಆನಂದ ಸಿಗುತ್ತಿತ್ತು. ಅಂತಹ ಮಾತಿನ ಮೋಡಿಯ ಮೂಲಕ ಆಟದ ಮಾಹಿತಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸುತ್ತಿದ್ದರು.

ಈ ವರ್ಷ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಯನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ವೀಕ್ಷಿಸಿದಾಗ, ವೀಕ್ಷಕ ವಿವರಣೆಕಾರರ ಪದ ಬಳಕೆ, ಮಾತಿನ ವೈಖರಿ ‘ಅಯ್ಯೋ ಇವರು ವಿವರಣೆ ಕೊಡದೇ ಇದ್ದರೆ ಚೆನ್ನಾಗಿತ್ತು’ ಎನ್ನಿಸುವಂತಿತ್ತು. ಅದಕ್ಕಿಂತ ಇಂಗ್ಲಿಷ್ ಅಥವಾ ಹಿಂದಿಯ ವೀಕ್ಷಕ ವಿವರಣೆ ಇರುವ ಕ್ರಿಕೆಟ್ ಪಂದ್ಯ ನೋಡಿದ್ದಿದ್ದರೇ ವಾಸಿ ಎನಿಸುತ್ತಿತ್ತು.

ಮುಂದೆ ವಿಶ್ವಕಪ್ ಕ್ರಿಕೆಟ್ ಪಂದ್ಯ ಇದೆ. ಆ ವೀಕ್ಷಕ ವಿವರಣೆಯೂ ಕರ್ಣ ಕಠೋರ ಆಗದೆ, ಕರ್ಣಾನಂದಕರ ಆಗಿರುವಂತೆ ಉತ್ತಮ ವೀಕ್ಷಕ ವಿವರಣೆಕಾರರನ್ನು ಸಂಘಟಕರು ನಿಯೋಜಿಸಲಿ.

– ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT