ಕುರುಬ ಸಮುದಾಯ ಸಾಂಸ್ಕೃತಿಕ ಪಲ್ಲಟಕ್ಕೆ ಮುಂದಾಗುತ್ತಿದೆಯೇ ಎಂದು ಶಿವಕುಮಾರ ಬಂಡೋಳಿ ಪ್ರಶ್ನಿಸಿದ್ದಾರೆ. 2017ರಲ್ಲಿ ಹರಿಹರದಲ್ಲಿ ಜರುಗಿದ ಕನಕದಾಸ ಜಯಂತ್ಯುತ್ಸವದಲ್ಲಿ ಸನ್ಮಾನಿತರಿಗೆ ನೆನಪಿನ ಕಾಣಿಕೆಯ ರೂಪದಲ್ಲಿ ಕೊಟ್ಟಿದ್ದು ರೇವಣಸಿದ್ಧೇಶ್ವರರ ಮೂರ್ತಿಯಾಗಿತ್ತು. ಆ ಮೂಲಕ ಕುರುಬ ಸಮುದಾಯದವರು ಕನಕದಾಸರನ್ನು ಕುಲಗುರುವನ್ನಾಗಿ ಸ್ವೀಕರಿಸಿಲ್ಲ ಎಂದು ಹೇಳಿದಂತಾಗಿದೆ.