ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮನಸ್ಸಿನ ಮಸಿ ತೊಳೆಯಬೇಕಿದೆ

Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಇದರಿಂದಾಗಿ ಇಂಗ್ಲಿಷ್‌ ಭಾಷೆಯ ನಾಮಫಲಕಗಳಿಗೆ ಕನ್ನಡಪರ ಹೋರಾಟಗಾರರು ಮಸಿ ಬಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 9).

ಇದು, ಅವರ ನೋವಿನ ಮಾತೇ ವಿನಾ, ಇಂಗ್ಲಿಷ್‌ ಭಾಷೆಯ ನಾಮಫಲಕಗಳಿಗೆ ಬಸಿ ಬಳಿಯಲು ಕೊಟ್ಟ ಕರೆಯಲ್ಲ. ಈ ಹಿಂದೆ ಇಂಗ್ಲಿಷ್‌ ಭಾಷೆಯ ನಾಮಫಲಕಗಳಿಗೆ ಡಾಂಬರು ಬಳಿಯುವ ಯೋಜನೆಯನ್ನು ಕನ್ನಡಪರ ಹೋರಾಟಗಾರರು ಹಮ್ಮಿಕೊಂಡಿದ್ದರು. ಅದಕ್ಕೆ ಬಹಳಷ್ಟು ಟೀಕೆಗಳು ಎದುರಾಗಿದ್ದರಿಂದ ಆ ಯೋಜನೆ ಮುಂದುವರಿಯಲಿಲ್ಲ. ಒಂದು ವೇಳೆ ಮುಂದುವರಿದಿದ್ದರೂ ಕನ್ನಡದ ನಾಮಫಲಕಗಳು ರಾರಾಜಿಸುವ ಭರವಸೆ ಇರಲಿಲ್ಲ.

ಎಲ್ಲಿಯವರೆಗೆ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ, ಪ್ರೀತಿ, ಗೌರವ, ಕಾಳಜಿ ಇರುವುದಿಲ್ಲವೋ ಅಲ್ಲಿಯವರೆಗೆ ಇಂಗ್ಲಿಷ್‌ ನಾಮಫಲಕಗಳೇ ಕಂಗೊಳಿಸುತ್ತಿರುತ್ತವೆ. ಇನ್ನೊಂದು ನೋವಿನ ಸಂಗತಿ ಎಂದರೆ, ಮನೆ ಬಾಡಿಗೆ ಕೊಡಲು ಉದ್ದೇಶಿಸಿದ ಮನೆ ಮಾಲೀಕರು ಹಾಕುವುದು ‘ಟು-ಲೆಟ್’ ಎಂಬ ಇಂಗ್ಲಿಷ್ ಬೋರ್ಡನ್ನೇ ವಿನಾ ‘ಮನೆ ಬಾಡಿಗೆಗಿದೆ’ ಎಂಬ ಬೋರ್ಡನ್ನಲ್ಲ. ಇಂಗ್ಲಿಷ್‌ ನಾಮಫಲಕಗಳಿಗೆ ಮಸಿ ಬಳಿಯುವುದಕ್ಕೆ ಬದಲು ಕನ್ನಡಿಗರ ಮನಸ್ಸಿನಲ್ಲಿರುವ ಇಂತಹ ಮಸಿಯನ್ನು ಮೊದಲು ತೊಳೆಯಬೇಕಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT