<p>ನಾಯಕನಟ ಸುದೀಪ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಬಂಡ್ರಿ ಎಂಬ ಗ್ರಾಮದಲ್ಲಿ ಅಭಿಮಾನಿಗಳು ಸುದೀಪ್ ಅವರ ಕಟೌಟ್ ಮುಂದೆ ಕೋಣವೊಂದನ್ನು ಬಲಿ ನೀಡಿದ್ದಲ್ಲದೆ, ರಕ್ತವನ್ನು ಕೈಯಲ್ಲಿ ಹಿಡಿದು ಕಟೌಟ್ಗೆ ಎರಚಿರುವುದು ಅಮಾನವೀಯ ನಡವಳಿಕೆ. ಕೋಣ ಬಲಿ ನೀಡುವುದು ಅಪರಾಧ ಎಂದು ಗೊತ್ತಿದ್ದರೂ ಅಭಿಮಾನಿಗಳು ಹೀಗೆ ಅತಿರೇಕದಿಂದ ವರ್ತಿಸಿದ್ದು ಸರಿಯಲ್ಲ.</p>.<p>ಯಾವುದೇ ಒಬ್ಬ ನಟ ತನ್ನ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳ ಇಂತಹ ಹುಚ್ಚು ವರ್ತನೆಯನ್ನು ಸಹಿಸು ವುದಿಲ್ಲ. ಅಭಿಮಾನಿಗಳ ಇಂತಹ ಹುಚ್ಚುತನದ ಪರಮಾವಧಿ ಪರೋಕ್ಷವಾಗಿ ನಟರಿಗೆ ಮಾಡಿದ ಅವಮಾನದಂತೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಕಳಕಳಿ ಹೊಂದಿರುವ ನಟರು ಕೂಡ, ಅಭಿಮಾನಿಗಳ ಅತಿರೇಕದ ವರ್ತನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿ ಜವಾಬ್ದಾರಿ ಮೆರೆಯಬೇಕಾಗಿದೆ. ಏನೇ ಆಗಲಿ ಕೋಣ ಬಲಿ ನೀಡಿದ ಅಭಿಮಾನಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.</p>.<p><em><strong><span class="media-container dcx_media_rtab " data-dcx_media_config="{}" data-dcx_media_parsed="true" data-dcx_media_type="rtab" data-mce-contenteditable="false">-</span>ಮುರುಗೇಶ ಡಿ., <span class="Designate">ದಾವಣಗೆರೆ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಯಕನಟ ಸುದೀಪ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಬಂಡ್ರಿ ಎಂಬ ಗ್ರಾಮದಲ್ಲಿ ಅಭಿಮಾನಿಗಳು ಸುದೀಪ್ ಅವರ ಕಟೌಟ್ ಮುಂದೆ ಕೋಣವೊಂದನ್ನು ಬಲಿ ನೀಡಿದ್ದಲ್ಲದೆ, ರಕ್ತವನ್ನು ಕೈಯಲ್ಲಿ ಹಿಡಿದು ಕಟೌಟ್ಗೆ ಎರಚಿರುವುದು ಅಮಾನವೀಯ ನಡವಳಿಕೆ. ಕೋಣ ಬಲಿ ನೀಡುವುದು ಅಪರಾಧ ಎಂದು ಗೊತ್ತಿದ್ದರೂ ಅಭಿಮಾನಿಗಳು ಹೀಗೆ ಅತಿರೇಕದಿಂದ ವರ್ತಿಸಿದ್ದು ಸರಿಯಲ್ಲ.</p>.<p>ಯಾವುದೇ ಒಬ್ಬ ನಟ ತನ್ನ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳ ಇಂತಹ ಹುಚ್ಚು ವರ್ತನೆಯನ್ನು ಸಹಿಸು ವುದಿಲ್ಲ. ಅಭಿಮಾನಿಗಳ ಇಂತಹ ಹುಚ್ಚುತನದ ಪರಮಾವಧಿ ಪರೋಕ್ಷವಾಗಿ ನಟರಿಗೆ ಮಾಡಿದ ಅವಮಾನದಂತೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಕಳಕಳಿ ಹೊಂದಿರುವ ನಟರು ಕೂಡ, ಅಭಿಮಾನಿಗಳ ಅತಿರೇಕದ ವರ್ತನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿ ಜವಾಬ್ದಾರಿ ಮೆರೆಯಬೇಕಾಗಿದೆ. ಏನೇ ಆಗಲಿ ಕೋಣ ಬಲಿ ನೀಡಿದ ಅಭಿಮಾನಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.</p>.<p><em><strong><span class="media-container dcx_media_rtab " data-dcx_media_config="{}" data-dcx_media_parsed="true" data-dcx_media_type="rtab" data-mce-contenteditable="false">-</span>ಮುರುಗೇಶ ಡಿ., <span class="Designate">ದಾವಣಗೆರೆ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>