<p>ಕೋಲಾರ ಜಿಲ್ಲೆಯ ದಾನವಹಳ್ಳಿಯಲ್ಲಿ ಪರಿಶಿಷ್ಟರು ಮತ್ತು ಪ್ರಬಲ ಜಾತಿಯವರ ನಡುವೆ ದೇವರ ಮೆರವಣಿಗೆ ಹಾಗೂ ಪೂಜೆಗೆ ಸಂಬಂಧಿಸಿದಂತೆ ಹೊಡೆದಾಟ, ಹೊಯ್ದಾಟಗಳು ನಡೆದಿವೆ. ಈ ಪ್ರಕರಣದ ಒಳಹೊಕ್ಕು ನೋಡಿದರೆ, ಪ್ರಬಲರ ಮನಃಸ್ಥಿತಿಯಲ್ಲಿ ಅಡಗಿರುವ ಪಾಳೆಗಾರಿಕೆಯ ಮನೋಭಾವ, ಅಸಹನೆ ಮತ್ತು ಅಸೂಯೆಯನ್ನು ಹಾಗೂ ಪರಿಶಿಷ್ಟರ ಅಂತರಂಗದಲ್ಲಿ ಅಡಗಿರುವ ಮಾನವ ಸ್ವಾಭಿಮಾನದ ಅಪೇಕ್ಷೆಯನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಈ ಬಗೆಯ ದೇವರು, ಧರ್ಮ ಮತ್ತು ಜಾತಿಯ ಹೆಸರಿನ ಗದ್ದಲವು ನಮ್ಮ ದೇಶದ ನೈಜ ಅಭಿವೃದ್ಧಿಗೆ ಬಾಧಕವಾಗಿದೆ.</p>.<p>ಇಂಥ ಮಾನಸಿಕ- ಸಾಂಸ್ಕೃತಿಕ ಮನಃಸ್ಥಿತಿಯನ್ನು ಹೋಗಲಾಡಿಸುವಲ್ಲಿ ಧರ್ಮಾಧಾರಿತ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಮಾತ್ರವಲ್ಲ, ಮಾನವ ಕಳಕಳಿಯುಳ್ಳವರೆಲ್ಲರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕಾದಅನಿವಾರ್ಯ ಈಗ ಒದಗಿಬಂದಿದೆ. ಧರ್ಮದ ಹೆಸರಿನಲ್ಲಿ ಮಾತನಾಡುವ ಸಂಘಗಳು ಮತ್ತು ರಾಜಕೀಯ ಕಾರಣಕ್ಕಾಗಿ ದೇಶ ಸುತ್ತುವ ನಾಯಕರು ಇಂಥ ಕಡೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಜರೂರಿದೆ ಹಾಗೂ ಅದು ಅನಿವಾರ್ಯವೂ ಆಗಿದೆ.</p>.<p>⇒ಹೊರೆಯಾಲ ದೊರೆಸ್ವಾಮಿ,ಮೈಸೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ ಜಿಲ್ಲೆಯ ದಾನವಹಳ್ಳಿಯಲ್ಲಿ ಪರಿಶಿಷ್ಟರು ಮತ್ತು ಪ್ರಬಲ ಜಾತಿಯವರ ನಡುವೆ ದೇವರ ಮೆರವಣಿಗೆ ಹಾಗೂ ಪೂಜೆಗೆ ಸಂಬಂಧಿಸಿದಂತೆ ಹೊಡೆದಾಟ, ಹೊಯ್ದಾಟಗಳು ನಡೆದಿವೆ. ಈ ಪ್ರಕರಣದ ಒಳಹೊಕ್ಕು ನೋಡಿದರೆ, ಪ್ರಬಲರ ಮನಃಸ್ಥಿತಿಯಲ್ಲಿ ಅಡಗಿರುವ ಪಾಳೆಗಾರಿಕೆಯ ಮನೋಭಾವ, ಅಸಹನೆ ಮತ್ತು ಅಸೂಯೆಯನ್ನು ಹಾಗೂ ಪರಿಶಿಷ್ಟರ ಅಂತರಂಗದಲ್ಲಿ ಅಡಗಿರುವ ಮಾನವ ಸ್ವಾಭಿಮಾನದ ಅಪೇಕ್ಷೆಯನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಈ ಬಗೆಯ ದೇವರು, ಧರ್ಮ ಮತ್ತು ಜಾತಿಯ ಹೆಸರಿನ ಗದ್ದಲವು ನಮ್ಮ ದೇಶದ ನೈಜ ಅಭಿವೃದ್ಧಿಗೆ ಬಾಧಕವಾಗಿದೆ.</p>.<p>ಇಂಥ ಮಾನಸಿಕ- ಸಾಂಸ್ಕೃತಿಕ ಮನಃಸ್ಥಿತಿಯನ್ನು ಹೋಗಲಾಡಿಸುವಲ್ಲಿ ಧರ್ಮಾಧಾರಿತ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಮಾತ್ರವಲ್ಲ, ಮಾನವ ಕಳಕಳಿಯುಳ್ಳವರೆಲ್ಲರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕಾದಅನಿವಾರ್ಯ ಈಗ ಒದಗಿಬಂದಿದೆ. ಧರ್ಮದ ಹೆಸರಿನಲ್ಲಿ ಮಾತನಾಡುವ ಸಂಘಗಳು ಮತ್ತು ರಾಜಕೀಯ ಕಾರಣಕ್ಕಾಗಿ ದೇಶ ಸುತ್ತುವ ನಾಯಕರು ಇಂಥ ಕಡೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಜರೂರಿದೆ ಹಾಗೂ ಅದು ಅನಿವಾರ್ಯವೂ ಆಗಿದೆ.</p>.<p>⇒ಹೊರೆಯಾಲ ದೊರೆಸ್ವಾಮಿ,ಮೈಸೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>