ಬಹುತೇಕ ಪೋಷಕರು ಕೂಲಿ ನಾಲಿ, ವ್ಯವಸಾಯ ಚಟುವಟಿಕೆಗೆ ಹೋಗಿರುತ್ತಾರೆ. ಮಧ್ಯಾಹ್ನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದು. ಇದರಿಂದ, ಬೆಳೆಯುತ್ತಿರುವ ಮಕ್ಕಳು ಕುಪೋಷಣೆಗೆ ಒಳಗಾಗಬಹುದು. ಎಸ್ಎಸ್ಎಲ್ಸಿ ಓದುವ ಮಕ್ಕಳು ಪಬ್ಲಿಕ್ ಪರೀಕ್ಷೆಗೆ ಸಿದ್ಧರಾಗಬೇಕಾಗಿರುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರಿಯಾಗಿ ಊಟ ಮಾಡದೇ ಹೋದಾಗ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾ ಜಾಗೃತಿ ಮುಂಜಾಗ್ರತಾ ಕ್ರಮ ಅನುಸರಿಸುತ್ತಾ ಅಕ್ಷರದಾಸೋಹ ಆರಂಭಿಸಬೇಕು.