ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರ ಸ್ಪರ್ಧೆಯ ಫಲಿತಾಂಶ ಬರುವುದೆಂದು?

Last Updated 18 ಫೆಬ್ರುವರಿ 2019, 20:01 IST
ಅಕ್ಷರ ಗಾತ್ರ

ರಾಜ್ಯದ ಅಂಚೆ ಇಲಾಖೆಯು ಅಕ್ಟೋಬರ್‌ 9ರಂದು ವಿಶ್ವ ಅಂಚೆ ದಿನಾಚರಣೆಯ ಪ್ರಯುಕ್ತ ಹಿರಿಕಿರಿಯರಿಗಾಗಿ ‘ತಾಯಿನಾಡಿಗೆ ಒಂದು ಪತ್ರ’ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕನ್ನಡ, ಹಿಂದಿ ಮುಂತಾದ ಭಾಷೆಗಳಲ್ಲಿ ಪತ್ರ ಬರೆಯಲು ಅವಕಾಶವಿತ್ತು. ರಾಜ್ಯದ ನೂರಾರು ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪತ್ರ ಸ್ಪರ್ಧೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಯಾವಾಗ ಫಲಿತಾಂಶ ಪ್ರಕಟವಾಗುತ್ತದೆ ಎಂಬುದನ್ನು ಅಂಚೆ ಇಲಾಖೆ ತಿಳಿಸಲಿಲ್ಲ. ಈ ಸಂದರ್ಭದಲ್ಲಿ ದಿನಕರ ದೇಸಾಯಿ ಅವರ ಚುಟುಕ ನೆನಪಾಗುತ್ತದೆ.

ಅಂಚೆ ಖಾತೆಯ ವೇಗ ಅತ್ಯಂತ ಜೋರು

ಪತ್ರಗಳು ಮುಟ್ಟಲಿಕೆ ದಿವಸ ಹದಿನಾರು

ಎಕ್ಸ್‌ಪ್ರೆಸ್ಸು ಡಿಲಿವರಿಯ ಪತ್ರಗಳಿಗಿಂತ

ಹೆರಿಗೆ ಡಿಲಿವರಿ ಮೊದಲು ಕೇಳು, ಗುಣವಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT