ಬೆಳಗಾವಿ ಅಧಿವೇಶನವು ರಾಜ್ಯದ ಜನತೆಗೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ಚರ್ಚಿಸದೆ, ಬರೀ ಮತಾಂತರ ನಿಷೇಧ ಕಾಯ್ದೆಯ ಪರ, ವಿರೋಧದ ಚರ್ಚೆಯಲ್ಲೇ ಮುಗಿದುಹೋಯಿತು. ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ ಹರಡುವಿಕೆ, ನೆರೆ ಪರಿಹಾರ, ನಿರುದ್ಯೋಗ, ಹೊಸ ಶಿಕ್ಷಣ ನೀತಿ, ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆಯಂತಹ ಸಾಲು ಸಾಲು ವಿಷಯಗಳನ್ನು ಸರ್ಕಾರ ಅಥವಾ ವಿರೋಧ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ಬಜೆಟ್ ಅಧಿವೇಶನಕ್ಕೂ ಮುನ್ನ ಮತಧರ್ಮಗಳ ವಿಷಯಗಳನ್ನು ಬಿಟ್ಟು ಈಗಿರುವ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ.