ಆದರೆ, ಮುಖ್ಯಮಂತ್ರಿಯೊಬ್ಬರು ಬಜೆಟ್ನ ಸಾರ್ವಜನಿಕ ಅಭಿವೃದ್ಧಿಯ ಹಣವನ್ನು ಮಠಗಳಿಗೆ ಅನುದಾನವಾಗಿ ನೀಡಿದಾಗ, ಆ ಹಣಕ್ಕೆ ಜೋಳಿಗೆಯೊಡ್ಡಿದಂತೆ ಜೋಳಿಗೆಯ ಪಾವಿತ್ರ್ಯದ ಜೊತೆಗೆ ಬಜೆಟ್ಟಿನ ಪಾವಿತ್ರ್ಯವನ್ನೂ ನಾಶ ಮಾಡಿರುವಾಗ, ಭ್ರಷ್ಟಾಚಾರವನ್ನೂ ಲಂಚಗುಳಿತನವನ್ನೂ ಸ್ವಜನಪಕ್ಷಪಾತವನ್ನೂ ಜೋಳಿಗೆಗೆ ಹಾಕಿಸಿಕೊಳ್ಳುವ ನೈತಿಕ ಅಧಿಕಾರವನ್ನು ಯಾವ ಜೋಳಿಗೆ ಉಳಿಸಿಕೊಂಡಿದೆ? ಹುಡುಕಬೇಕಿದೆ.