ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಜೋಳಿಗೆಗಿದೆ ನೈತಿಕ ಅಧಿಕಾರ?

Last Updated 31 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

‘ಗುರು’ ಲಘುವಾದರೆ ಹೇಗೆ ಸ್ವಾಮಿ?’ ಎಂಬ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಡಿ.30) ಸಕಾಲಿಕ ಹಾಗೂ ಸಮರ್ಥವಾಗಿದೆ. ಮಠಗಳ ಸ್ವಾಮಿಗಳು ರಾಜಕೀಯ ಮಾಡುತ್ತಿರುವುದರ ಬಗ್ಗೆ ಹಾಗೂ ಕೆಪಿಎಸ್‌ಸಿಯು ಭ್ರಷ್ಟ ತಿರಸ್ಕೃತ ಪಟ್ಟಿಯ ಅಭ್ಯರ್ಥಿಗಳ ಪರವಾಗಿ ಲಾಬಿಗೆ ತೊಡಗಿರುವ ಬಗ್ಗೆ ಮಾತನಾಡಿರುವುದು ಸಮಂಜಸವಿದೆ.

ಆದರೆ, ಮುಖ್ಯಮಂತ್ರಿಯೊಬ್ಬರು ಬಜೆಟ್‌ನ ಸಾರ್ವಜನಿಕ ಅಭಿವೃದ್ಧಿಯ ಹಣವನ್ನು ಮಠಗಳಿಗೆ ಅನುದಾನವಾಗಿ ನೀಡಿದಾಗ, ಆ ಹಣಕ್ಕೆ ಜೋಳಿಗೆಯೊಡ್ಡಿದಂತೆ ಜೋಳಿಗೆಯ ಪಾವಿತ್ರ್ಯದ ಜೊತೆಗೆ ಬಜೆಟ್ಟಿನ ಪಾವಿತ್ರ್ಯವನ್ನೂ ನಾಶ ಮಾಡಿರುವಾಗ, ಭ್ರಷ್ಟಾಚಾರವನ್ನೂ ಲಂಚಗುಳಿತನವನ್ನೂ ಸ್ವಜನಪಕ್ಷಪಾತವನ್ನೂ ಜೋಳಿಗೆಗೆ ಹಾಕಿಸಿಕೊಳ್ಳುವ ನೈತಿಕ ಅಧಿಕಾರವನ್ನು ಯಾವ ಜೋಳಿಗೆ ಉಳಿಸಿಕೊಂಡಿದೆ? ಹುಡುಕಬೇಕಿದೆ.

ಎಸ್.ಜಿ.ಸಿದ್ಧರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT