ಕೊರೊನಾ ಎರಡನೇ ಅಲೆ ವೇಳೆ ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಸಂಸತ್ತಿಗೆ ಒಕ್ಕೂಟ ಸರ್ಕಾರ ಮಾಹಿತಿ ನೀಡಿರುವುದನ್ನು (ಪ್ರ.ವಾ., ಜುಲೈ 21) ತಿಳಿದು ಅಚ್ಚರಿಯಾಯಿತು. ಜನರ ಕಣ್ಣೆದುರಿಗೇ ಆಮ್ಲಜನಕ ಕೊರತೆಯಿಂದ ಸಾವುಗಳು ಸಂಭವಿಸಿರುವಾಗ ಸರ್ಕಾರವೇಕೆ ಈ ರೀತಿ ಸುಳ್ಳು ಹೇಳುತ್ತಿದೆ ಎಂಬುದು ತಿಳಿಯುತ್ತಿಲ್ಲ. ಆರೋಗ್ಯದ ವಿಷಯ ರಾಜ್ಯಗಳಿಗೆ ಸಂಬಂಧಪಟ್ಟದ್ದು, ರಾಜ್ಯಗಳು ಈ ರೀತಿಯ ಸಾವುಗಳ ಬಗ್ಗೆ ವರದಿ ನೀಡಿಲ್ಲ ಎಂಬ ಪಲಾಯನವಾದವು ಸರ್ಕಾರದ ಮೇಲಿನ ಜನರ ವಿಶ್ವಾಸ, ನಂಬಿಕೆಯನ್ನು ಹುಸಿಯಾಗಿಸುತ್ತದೆ.