ಮಹಾರಾಷ್ಟ್ರವೇ ಆಗಲಿ ಕರ್ನಾಟಕವೇ ಆಗಿರಲಿ ಗಡಿ ಗಲಾಟೆ ಜೋರಾಗಿ ಸದ್ದು ಮಾಡುವುದು ಚುನಾವಣೆ ಸಮಯದಲ್ಲಿಯೇ ಅನ್ನಿಸುತ್ತದೆ. ಸದ್ಯಕ್ಕೆ ಮಹಾರಾಷ್ಟ್ರ ಇದೀಗ ಮತ್ತೆ ಗಡಿ ಖ್ಯಾತೆ ತೆಗೆದಿದೆ. ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವ ಪಕ್ಷ ಸಭೆ ಕರೆದು ಈ ಬಾರಿ ಸರಿಯಾದ ಖಡಕ್ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಆದರೆ ಈ ಹೇಳಿಕೆ ನೋಡಿದರೆ, ಇದು ಪೇಪರ್ ಹುಲಿ, ಬಟ್ಟೆ ಹಾವಿನಂತೆ ಕಾಣುತ್ತಿದೆ. ಏಕೆಂದರೆ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಕಡೆ ಇರುವುದು ಬಿಜೆಪಿ ನೇತೃತ್ವದ ಸರ್ಕಾರಗಳು. ಜೊತೆಗೆ ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವೇ ಇರುವುದರಿಂದ ಟ್ರಿಪಲ್ ಎಂಜಿನ್ ಸರ್ಕಾರ ಎನ್ನಬಹುದು. ಹೀಗಾಗಿ, ಗಡಿ ಸಮಸ್ಯೆ ಬಗೆಹರಿಯಲು ಇದು ಸುಕಾಲ.