ಯಾವುದೇ ಯೋಜನೆಯಾಗಲಿ ಅದರಲ್ಲಿ ನಕಾರಾತ್ಮಕ ಅಂಶಗಳು ಇದ್ದಾಗ ಆ ಯೋಜನೆಯನ್ನು ಪ್ರಶ್ನೆ ಮಾಡುವ ಹಕ್ಕು ಈ ಪ್ರಜಾಪ್ರಭುತ್ವ ದೇಶದಲ್ಲಿ ಇದೆ. ಆದರೆ ಪ್ರಶ್ನೆ ಮಾಡುವ, ಹೋರಾಡುವ ರೀತಿ- ನೀತಿ ಶಾಂತಿಯುತವಾಗಿರಬೇಕು. ಸಾರ್ವಜನಿಕ, ಖಾಸಗಿ ಆಸ್ತಿಗಳನ್ನು ಬೆಂಕಿ ಹಚ್ಚಿ ಧ್ವಂಸ ಮಾಡುವ, ಜನರ ಜೀವಕ್ಕೆ ಅಪಾಯ ತಂದೊಡ್ಡುವ ಹಿಂಸಾತ್ಮಕ ಪ್ರತಿಭಟನೆ ಅದಾಗಿರಬಾರದು. ಈಗಾಗಲೇ ನಿರುದ್ಯೋಗದ ಬೆಂಕಿಯಲ್ಲಿ ಬೇಯುತ್ತಿರುವ ಯುವಜನರಿಗೆ ಶಾಶ್ವತ ಉದ್ಯೋಗ ಬೇಕಿದೆಯೇ ವಿನಾ ತಾತ್ಕಾಲಿಕ ಉದ್ಯೋಗ ಅಲ್ಲ ಎನ್ನುವುದನ್ನು ಸರ್ಕಾರ ಈ ಮೂಲಕ ಅರಿಯಬೇಕೆ?ನಿರ್ಮಲಾ ನಾಗೇಶ್,ಮುರ್ಡೇಶ್ವರ