‘ಕಾಂಗ್ರೆಸ್ನಲ್ಲಿ ಎಷ್ಟು ಜನ ರೌಡಿ ಶೀಟರ್ಗಳಿದ್ದಾರೆ ಎಂದು ಲೆಕ್ಕ ಹಾಕಲಿ’ ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಪ್ರ.ವಾ., ನ. 30). ಅಂದರೆ ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಾಗಲಿ ಅಥವಾ ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ವಿಚಾರದಲ್ಲಾಗಲಿ ಮುಖ್ಯಮಂತ್ರಿಯವರು ಕಾಂಗ್ರೆಸ್ ಪಕ್ಷದ ಜೊತೆಗೆ ಸ್ಪರ್ಧೆಗೆ ಇಳಿದಿದ್ದಾರೆಯೇ? ಅಥವಾ ಅವರಿಗೆ ಕಾಂಗ್ರೆಸ್ ಪಕ್ಷ ಆದರ್ಶವೇ? ಮುಖ್ಯಮಂತ್ರಿ ಅನುಸರಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನೋ ಅಥವಾ ಬಿಜೆಪಿ ಸಂಸ್ಕೃತಿಯನ್ನೋ? ಸರ್ಕಾರದ ಬೇರೆ ಬೇರೆ ತಪ್ಪುಗಳ ಬಗ್ಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದ ಮುಖಂಡರು ಏನಾದರೂ ಪ್ರಶ್ನೆ ಹಾಕಿದಾಗಲೂ ಇದೇ ರೀತಿ ಉತ್ತರ ನೀಡುವ ವರಸೆಯನ್ನು ಬಿಜೆಪಿ ಅನುಸರಿಸುತ್ತಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಆಳ್ವಿಕೆ ಸರಿಯಿಲ್ಲ ಎಂಬ ಕಾರಣದಿಂದಲೇ ಅಲ್ಲವೆ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟಿರುವುದು?