ಉಮೇಶ ಕತ್ತಿ ಅವರು ಕರ್ನಾಟಕದ ಒಬ್ಬ ಸಚಿವರಾಗಿ ರಾಜ್ಯ ವಿಭಜನೆ ಕುರಿತು ಪ್ರಸ್ತಾಪಿಸುವುದು ನಾಡದ್ರೋಹದ ಮಾತು. ಹಿಂದೊಮ್ಮೆ ಛಿದ್ರಗೊಂಡಿದ್ದ ಕನ್ನಡಿಗರನ್ನು ಒಂದು ರಾಜ್ಯದಡಿ ತರಬೇಕೆಂದು
ನಮ್ಮ ಹಿರಿಯರು ದೀರ್ಘಕಾಲ ಹೋರಾಟ ಮಾಡಿರುವ ಇತಿಹಾಸ ಕತ್ತಿ ಅವರಿಗೆ ತಿಳಿದಿಲ್ಲ ಅನಿಸುತ್ತದೆ. ಅಂದು ಹಳೆ ಮೈಸೂರು ಭಾಗದ ಕೆಲವರಿಗೆ ಇಷ್ಟವಿಲ್ಲದೇ ಇದ್ದರೂ ಕನ್ನಡಿಗರು ಒಟ್ಟಿಗೆ ಇರಬೇಕೆಂಬ ಉದ್ದೇಶದಿಂದ ಕೆಂಗಲ್ ಹನುಮಂತಯ್ಯ ಅವರು ಸಹ ಏಕೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಇತಿಹಾಸ.