ಇಂದಿನ ಗಣೇಶೋತ್ಸವ ತನ್ನ ಸಾಂಸ್ಕೃತಿಕ ಆಯಾಮವನ್ನೇ ಕಳೆದುಕೊಳ್ಳುತ್ತಿದೆ. ಹಾಡು, ಭಜನೆ, ಭಕ್ತಿಗೀತೆ, ಶಾಸ್ತ್ರೀಯ ನೃತ್ಯ, ಸಂಗೀತ, ಪುರಾಣ ವಾಚನದಂತಹ ಸಾತ್ವಿಕ ಚಟುವಟಿಕೆಗಳಿಗೆ ಹೆಸರಾಗಿದ್ದ ಉತ್ಸವದಲ್ಲಿ ಅಬ್ಬರ, ಆಡಂಬರ ವಿಜೃಂಭಿಸುತ್ತಿವೆ. ಅದರಲ್ಲೂ ಡಿ.ಜೆ ಶಬ್ದವಂತೂ ಎಂತಹವರಿಗೂ ಒಂದು ನಿಮಿಷ ಎದೆಬಡಿತ ನಿಂತು ಹೋಗುವಂತೆ ಇರುತ್ತದೆ.