ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದಲ್ಲಿ 90 ವರ್ಷದ ವೃದ್ಧೆಯೊಬ್ಬರನ್ನು ನಿತ್ರಾಣ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ವರದಿಯನ್ನು (ಪ್ರ.ವಾ., ಜ. 24) ಓದಿದಾಗ, ಪಾಪಪ್ರಜ್ಞೆಯು ಕಾಡದಿರುವ ಮಟ್ಟಿಗೆ ಮನುಷ್ಯ ಅಧೋಗತಿಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎನಿಸಿತು.
ನಮ್ಮನ್ನು ಸಾಕಿ–ಸಲುಹಿದ ಹೆತ್ತವರಿಗೆ ಊರುಗೋಲಾಗಿ ನಿಲ್ಲಬೇಕು. ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಅವರ ಬಗೆಗೆ ಕಾಳಜಿ ವಹಿಸಬೇಕು ಮತ್ತು ಬೆಂಬಲವನ್ನು ನೀಡಬೇಕು. ಇದು, ಮಕ್ಕಳ ಕರ್ತವ್ಯವೆಂಬ ಮನುಷ್ಯತ್ವದ ಅರಿವಿನ ಬೀಜವನ್ನು ಎಲ್ಲರೊಳಗೆ ಬಿತ್ತಬೇಕಾಗಿದೆ.