‘ಮೋದಿ ಕಾರಣದಿಂದಲೇ ನನಗೆ ಪುರಸ್ಕಾರ ದೊರೆತಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ...’ ಎಂದು ಭೈರಪ್ಪ ಹೇಳಿರುವುದು ಗಮನಾರ್ಹ! ‘ಈಗ ದೇಶ ಬಹಳ ಪ್ರಗತಿ ಸಾಧಿಸಿದೆ’ ಎಂಬ ಅವರ ಹೇಳಿಕೆಗೆ ವ್ಯತಿರಿಕ್ತವಾದ ಅಂಕಿ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನೋಡುತ್ತಲೇ ಇದ್ದೇವೆ. ಉದಾಹರಣೆಗೆ, ಆಕ್ಸ್ಫಾಮ್ ಎಂಬ ಸಂಸ್ಥೆ ತನ್ನ ‘ಸರ್ವೈವಲ್ ಆಫ್ ದಿ ರಿಚೆಸ್ಟ್: ದಿ ಇಂಡಿಯಾ ಸ್ಟೋರಿ’ ಎಂಬ ವರದಿಯಲ್ಲಿ, ಭಾರತದ ಜನಸಂಖ್ಯೆಯ
ಶೇ 1ರಷ್ಟು ಮಂದಿ ಇಡೀ ದೇಶದ ಸಂಪತ್ತಿನ ಶೇ 40ರಷ್ಟನ್ನು ಪಡೆದಿದ್ದಾರೆ, 70 ಕೋಟಿ ಜನರು ಪಡೆದಿರುವ ಐಶ್ವರ್ಯಕ್ಕೆ ಸಮಾನವಾದ ಐಶ್ವರ್ಯವನ್ನು 21 ಮಂದಿ ಹೊಂದಿದ್ದಾರೆ, ದೇಶದ ಒಟ್ಟು ಜನಸಂಖ್ಯೆಯ ಶೇ 50ರಷ್ಟು ಮಂದಿ ಪಡೆದಿರುವುದು ಶೇ 3ರಷ್ಟು ಸಂಪತ್ತು ಮಾತ್ರ ಎಂದೆಲ್ಲಾ ಗುರುತಿಸಿದೆ.