ಪ್ರವಾಹಗಳು ಸಂಭವಿಸಿ ಆಸ್ತಿಪಾಸ್ತಿ ಹಾನಿಯಾಗುವುದನ್ನು ಚಿಕ್ಕ ಚಿಕ್ಕ ಅಣೆಕಟ್ಟುಗಳು ತಡೆಯುತ್ತವೆ. ಕೃಷಿ ಅಭಿವೃದ್ಧಿ, ಅಂತರ್ಜಲ ಹೆಚ್ಚಳಕ್ಕೆ ಇವು ಸಹಕಾರಿ. ಜನರಿಗೆ ಕುಡಿಯುವ ನೀರು ಪೂರೈಕೆ, ಜಲಸಾರಿಗೆ ಮತ್ತು ವಿದ್ಯುತ್ ಉತ್ಪಾದನೆಗೂ ಈ ನದಿಯ ನೀರನ್ನು ಉಪಯೋಗಿಸಬಹುದು. ಇದನ್ನು ಬಿಟ್ಟು, ಪೂರ್ಣ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಸಮಾಜಕ್ಕೆ ಯಾವ ಲಾಭವೂ ಇಲ್ಲ.