ರಾಜ್ಯ ಬಿಜೆಪಿಯಲ್ಲಿ ಎರಡರಷ್ಟಿದ್ದ ಶಾಸಕರ ಸಂಖ್ಯೆಯನ್ನು ಬಹುಮತದ ಸರ್ಕಾರದತ್ತ ತಂದಿದ್ದು ಅವರ ಹೆಗ್ಗಳಿಕೆ. ಹಲವು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಹೆಚ್ಚು ಗುರುತಿಸಿಕೊಂಡಿದ್ದ ಅವರದು ರಾಜ್ಯ ರಾಜಕಾರಣ ಕಂಡ ಅಪರೂಪದ ವ್ಯಕ್ತಿತ್ವ. ಹೈಕಮಾಂಡ್ ನಿರ್ದೇಶನದಂತೆ ಮುಖ್ಯ ಮಂತ್ರಿ ಸ್ಥಾನ ತ್ಯಜಿಸಿರುವ ಯಡಿಯೂರಪ್ಪ ಅವರು ಅದಕ್ಕೂ ಮುನ್ನ ಭಾವುಕರಾಗಿ ಕಣ್ಣೀರು ಹಾಕಿರುವುದು, ಪದತ್ಯಾಗ ಅವರಿಗೆ ಇಷ್ಟವಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಆದರೆ, ಬಿಜೆಪಿಯ ತತ್ವ-ಸಿದ್ಧಾಂತದ ಅನ್ವಯ 75 ವರ್ಷ ಮೇಲ್ಪಟ್ಟವರು ರಾಜಕೀಯನಿವೃತ್ತಿ ಪಡೆದುಕೊಳ್ಳಬೇಕೆಂಬುದರ ಆಧಾರದ ಮೇಲೆ ಅವರ ತಲೆದಂಡವಾಗುತ್ತಿರುವುದು ಅನಿರೀಕ್ಷಿತವೇನಲ್ಲ.