ಆರ್ಥಿಕ ಹಿಂದುಳಿದಿರುವಿಕೆಯನ್ನು ಬದಲಾಯಿಸಬಹುದು, ಆದರೆ, ತುಚ್ಛೀಕರಣದ ಪಿಡುಗಿನಿಂದ ಹೊರಬರುವುದು ಅಸಾಧ್ಯ. ಈಗಾಗಲೇ ಸಹಸ್ರಾರು ವರ್ಷಗಳಿಂದ ಸಮಾಜದ ತುಳಿತಕ್ಕೆ ಒಳಗಾಗಿರುವ ಅಶಕ್ತರನ್ನು ಹಿಂದುಳಿಸಿರುವ ತುಚ್ಛೀಕರಣದ ವಾಸ್ತವವನ್ನು ಕಂಡಾದರೂ ‘ಶಕ್ತರು’ ಮಾನವತೆಯಿಂದ, ಜವಾವ್ದಾರಿಯಿಂದ ಮುಂದೆ ಬಂದು, ಶೇ 10 ಮೀಸಲಾತಿಯನ್ನು ಸ್ವೀಕರಿಸದೆ, ಅಶಕ್ತರ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು. ‘ಕೆಳವರ್ಗ’ ಎಂಬ ಪಿಡುಗಿಗೆ ಒಳಗಾಗಿರುವವರು ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಸಾಮಾನ್ಯ ಮತ್ತು ಅಭಿವೃದ್ಧಿಗೆ ತಳಪಾಯ ಹಾಕಿದ ಕೀರ್ತಿ ಅವರಿಗೆ ಸೇರಿದೆ ಎಂಬ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಾಗಿದೆ.
-ಕೆ.ಎನ್.ಭಗವಾನ್, ಬೆಂಗಳೂರು