ವಿಶ್ವಾಮಿತ್ರ ಎಂಬ ಮುನಿ ತನ್ನ ತಪಸ್ಸು ಫಲಿಸುವ ಮುನ್ನವೇ ವಿಧಿಯ ಕೈವಾಡದಿಂದ ರಂಭೆ ಎಂಬ ಗಾಳಕ್ಕೆ ಬಲಿಬೀಳಬೇಕಾಗುತ್ತದೆ. ಅದರಂತೆಯೇ ಪಿಎಸ್ಐ ಅಭ್ಯರ್ಥಿಗಳು ವರ್ಷಗಟ್ಟಲೇ ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗಿ, ಇನ್ನೇನು ಯಶಸ್ಸಿನ ಫಲ ಕೈಗೆ ಎಟಕುತ್ತದೆ ಎನ್ನುವ ಹೊತ್ತಿಗೆ ವ್ಯವಸ್ಥೆಯ ‘ರಂಭಾ ಗಾಳ’ಕ್ಕೆ ಬಲಿಯಾಗಿದ್ದಾರೆ. ವ್ಯವಸ್ಥೆ ನಿರ್ದಯವಾಗಿ ಮತ್ತೊಮ್ಮೆ ಪರೀಕ್ಷೆ ಬರೆಸಲು ಮುಂದಾಗಿರುವುದು ವಿಪರ್ಯಾಸ.