ಸರ್ಕಾರ ನಡೆಸುವ ಯಾರೊಬ್ಬರಿಗೂ ನ್ಯಾಯ, ನೀತಿ, ಧರ್ಮ ಬೇಡವಾಗಿವೆ. ತಮ್ಮ ಪಕ್ಷದವರು ಅತ್ಯಾಚಾರ ಮಾಡಿದರೂ ಕೊಲೆಯನ್ನೇ ಮಾಡಿದರೂ ಅಂತಹವರ ಪರ ನಿಲ್ಲುವುದು ಅಲಿಖಿತ ಒಪ್ಪಂದವಾಗಿ ಬಿಟ್ಟಿದೆ. ಲಖಿಂಪುರ– ಖೇರಿ ಪ್ರಕರಣದಲ್ಲಿ ಈಗ ನಡೆಯುತ್ತಿರುವುದು ಇದಕ್ಕೆ ಜ್ವಲಂತ ಸಾಕ್ಷಿ. ಆರೋಪಿ ಸ್ಥಾನದಲ್ಲಿ ಇರುವ ಕೇಂದ್ರ ಸಚಿವರೊಬ್ಬರ ಮಗನನ್ನು ಉಳಿಸಲು, ನಡೆದ ಘಟನೆಯನ್ನೇ ಬುಡಮೇಲು ಮಾಡಹೊರಟಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ. ಮಗನ ಮೇಲೆ ಗಂಭೀರ ಆರೋಪವಿದ್ದರೂ ತಮ್ಮ ಸ್ಥಾನವನ್ನು ತ್ಯಜಿಸದೇ ಇರುವುದಕ್ಕೆ ಏನನ್ನಬೇಕು? ಅಂತಹ ಸಚಿವರನ್ನು ಪ್ರಧಾನಿ ತಮ್ಮ ಸಂಪುಟದಲ್ಲಿ ಇನ್ನೂ ಉಳಿಸಿಕೊಂಡಿರುವುದು ನಾಡಿನ ದುರ್ದೈವವೇ ಸರಿ.