ಭೂಪರಿವರ್ತನೆ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ. ತಿದ್ದುಪಡಿಯ ಅಗತ್ಯವೂ ಇದೆ. ಆದರೆ ಮಸೂದೆಯು ವಿಧಾನಮಂಡಲದಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಗಾಗಿದ್ದರೆ ಅದರ ಸಾಧಕ–ಬಾಧಕಗಳು ಬೆಳಕು ಕಾಣುತ್ತಿದ್ದವು. ಸುಗ್ರೀವಾಜ್ಞೆಯು ತುರ್ತು ಸಂದರ್ಭಗಳಿಗಷ್ಟೇ ಸೀಮಿತ ಆಗಿರಬೇಕು.