ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮನುಷ್ಯ ಸಾಯುವುದಕ್ಕಿಂತ ಮುಂಚೆ...

Last Updated 7 ಮೇ 2021, 19:30 IST
ಅಕ್ಷರ ಗಾತ್ರ

ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕಿಂಗ್ ದಂಧೆ, ರೆಮಿಡಿಸಿವಿರ್ ಮಾತ್ರೆ ಕಾಳಸಂತೆಯಲ್ಲಿ ಮಾರಾಟ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲಾಡಳಿತಗಳ ಕಿತ್ತಾಟ, ಪೂರ್ತಿ ಹಣ ಪಾವತಿ ಮಾಡದಿದ್ದಕ್ಕೆ ಶವ ಕೊಡಲು ನಿರಾಕರಣೆ, ಶವ ಸಾಗಿಸುವ ಆಂಬುಲೆನ್ಸ್‌ನ ದುಬಾರಿ ಶುಲ್ಕ ಪಾವತಿಗಾಗಿ ತಾಳಿ ಮಾರಾಟ, ಆಹಾರಧಾನ್ಯ ಕೇಳಿದ್ದಕ್ಕೆ ‘ಸಾಯುವುದೇ ಒಳ್ಳೆಯದು’ ಎಂದ ಮಂತ್ರಿ... ಇದನ್ನೆಲ್ಲ ನೋಡುತ್ತಿದ್ದರೆ, ಮನುಷ್ಯ ಸಾಯುವುದಕ್ಕೆ ಮುಂಚೆ ಮನುಷ್ಯತ್ವ ಸತ್ತು ಹೋಗುತ್ತಿದೆಯೇನೋ ಎನಿಸುತ್ತದೆ.

ಲಕ್ಷಾಂತರ ಜೀವಿಗಳು ಈ ಭೂಮಿಯ ಮೇಲೆ ಜೀವಿಸಲು ಪ್ರಕೃತಿ ಅವಕಾಶ ಮಾಡಿಕೊಟ್ಟಿದೆ. ಆದರೆ ಮನುಷ್ಯನಷ್ಟು ನಿಕೃಷ್ಟ ಮತ್ತು ನೀಚತನದಿಂದ ಯಾವ ಜೀವಿಯೂ ಬದುಕುತ್ತಿಲ್ಲ. ಇದನ್ನು ಕಂಡೇ ಈಗ ಪ್ರಕೃತಿ ಈ ಪಾಠ ಕಲಿಸುತ್ತಿರಬಹುದು. ಪಾಠ ಕಲಿಯುತ್ತೇವೆಯೇ...?

ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT