ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕಿಂಗ್ ದಂಧೆ, ರೆಮಿಡಿಸಿವಿರ್ ಮಾತ್ರೆ ಕಾಳಸಂತೆಯಲ್ಲಿ ಮಾರಾಟ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲಾಡಳಿತಗಳ ಕಿತ್ತಾಟ, ಪೂರ್ತಿ ಹಣ ಪಾವತಿ ಮಾಡದಿದ್ದಕ್ಕೆ ಶವ ಕೊಡಲು ನಿರಾಕರಣೆ, ಶವ ಸಾಗಿಸುವ ಆಂಬುಲೆನ್ಸ್ನ ದುಬಾರಿ ಶುಲ್ಕ ಪಾವತಿಗಾಗಿ ತಾಳಿ ಮಾರಾಟ, ಆಹಾರಧಾನ್ಯ ಕೇಳಿದ್ದಕ್ಕೆ ‘ಸಾಯುವುದೇ ಒಳ್ಳೆಯದು’ ಎಂದ ಮಂತ್ರಿ... ಇದನ್ನೆಲ್ಲ ನೋಡುತ್ತಿದ್ದರೆ, ಮನುಷ್ಯ ಸಾಯುವುದಕ್ಕೆ ಮುಂಚೆ ಮನುಷ್ಯತ್ವ ಸತ್ತು ಹೋಗುತ್ತಿದೆಯೇನೋ ಎನಿಸುತ್ತದೆ.