ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ವಿಶ್ವ ಹೃದಯ ದಿನದ (ಸೆ. 29) ಸಂದರ್ಭದಲ್ಲಿ ವೈದ್ಯರು ತಿಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೃದಯ ತಜ್ಞರು ಹೃದಯಾಘಾತಕ್ಕೆ ನೀಡುವ ಕಾರಣಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ, ಮದ್ಯಪಾನ, ಧೂಮಪಾನ, ಮಾನಸಿಕ ಒತ್ತಡ ಮತ್ತು ಪರಿಸರ ಮಾಲಿನ್ಯ ಮುಖ್ಯವಾದವು. ಇವುಗಳಲ್ಲಿ ಪರಿಸರ ಮಾಲಿನ್ಯ ಹೊರತುಪಡಿಸಿದರೆ, ಉಳಿದ ಎಲ್ಲ ಕಾರಣಗಳಿಗೆ ಒಬ್ಬ ವ್ಯಕ್ತಿಯ ವೈಯಕ್ತಿಕ ಜೀವನಶೈಲಿ ಕಾರಣವಾಗಬಹುದು. ಆದರೆ ಪರಿಸರ ಮಾಲಿನ್ಯಕ್ಕೆ ನಮ್ಮ ಆಡಳಿತ ಕಾರಣವಾಗುತ್ತದೆ. ಸ್ವಚ್ಛ, ಸುಂದರ, ಪ್ರಶಾಂತ ವಾತಾವರಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕಾದುದು ಆಡಳಿತ ನಡೆಸುವವರ ಹೊಣೆ. ಯಾರೋ ಮಾಡುವ ತಪ್ಪಿಗೆ ಬೇರೆಯವರ ಜೀವ ಬಲಿಯಾಗುವುದನ್ನು ತಪ್ಪಿಸಬೇಕು.