ಗ್ರಂಥಾಲಯದಲ್ಲಿ ವೇದಶಾಸ್ತ್ರಗಳಿರುತ್ತವೆ. ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ವೆ ನೋಡಾ’ ಎಂಬಂತಹ ಬಸವಣ್ಣನವರ ವಚನಗಳಿರುತ್ತವೆ. ಮನುಸ್ಮೃತಿಯೂ ಇರುತ್ತದೆ. ಅದನ್ನು ಸುಟ್ಟ ಅಂಬೇಡ್ಕರ್ ಅವರ ವೈಚಾರಿಕ ಪುಸ್ತಕಗಳೂ ಇರುತ್ತವೆ. ಓದುಗರು ತಮಗೆ ಬೇಕೆನಿಸಿದ್ದನ್ನು ಓದುತ್ತಾರೆ. ಓದುಗರ ಸ್ವಾತಂತ್ರ್ಯ ಕಸಿದ ಇಂತಹ ಕ್ರಮವನ್ನು ಒಬ್ಬ ಓದುಗನಾಗಿ ಪ್ರಶ್ನಿಸುತ್ತೇನೆ. ಏಕಮುಖಿ ವಿಚಾರವನ್ನು ಪ್ರತಿಪಾದಿಸುವ ನಿಲುವನ್ನು ಒಬ್ಬ ಬರಹಗಾರನಾಗಿ ಖಂಡಿಸುತ್ತೇನೆ.