ಎಲ್ಲ ಜಾತಿ, ಜನಾಂಗ, ಧರ್ಮದವರ ಸಹಕಾರದಿಂದ ಜನಪ್ರತಿನಿಧಿಗಳಾದವರು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಜಾತಿ– ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಎನ್ನುವ ಸರ್ವಜ್ಞನ ವಾಣಿಯಂತೆ, ಬರೀ ನಾನು, ನನ್ನದು ಎನ್ನುವುದನ್ನು ಬಿಟ್ಟು ಎಲ್ಲ ಜಾತಿ, ಜನಾಂಗ, ಧರ್ಮದವರ ಮೌಲ್ಯಗಳನ್ನೂ ಜನಪ್ರತಿನಿಧಿಗಳು ಗೌರವಿಸಲಿ.