ಹೊಳಲ್ಕೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರು ಹಾಗೂ ಕೊಳ್ಳುವವರಿಗೆ ದಂಡ ವಿಧಿಸಿ, ಈ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುತ್ತಿರುವ ವರದಿ (ಪ್ರ.ವಾ., ಡಿ. 18) ನಿಜಕ್ಕೂ ಆಶ್ಚರ್ಯ ತಂದಿದೆ. ಮದ್ಯಪಾನಮುಕ್ತ ಗ್ರಾಮ ಆಗಬೇಕು ಎಂಬ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಮಾತನ್ನು ಗ್ರಾಮಸ್ಥರು ಕಾರ್ಯರೂಪಕ್ಕೆ ತಂದು ಸೈ ಎನ್ನಿಸಿಕೊಂಡಿರುವುದು, ಈ ದಿನಮಾನಗಳಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ. ಇಂತಹ ಬದಲಾವಣೆ ಆಂದೋಲನ ಈ ರೀತಿ ಗಟ್ಟಿಯಾಗಿ, ಸಣ್ಣದಾಗಿ ಆರಂಭಗೊಂಡು ವ್ಯಾಪಕತೆ ಪಡೆಯಬೇಕು.