<p>ಹೊಳಲ್ಕೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರು ಹಾಗೂ ಕೊಳ್ಳುವವರಿಗೆ ದಂಡ ವಿಧಿಸಿ, ಈ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುತ್ತಿರುವ ವರದಿ (ಪ್ರ.ವಾ., ಡಿ. 18) ನಿಜಕ್ಕೂ ಆಶ್ಚರ್ಯ ತಂದಿದೆ. ಮದ್ಯಪಾನಮುಕ್ತ ಗ್ರಾಮ ಆಗಬೇಕು ಎಂಬ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಮಾತನ್ನು ಗ್ರಾಮಸ್ಥರು ಕಾರ್ಯರೂಪಕ್ಕೆ ತಂದು ಸೈ ಎನ್ನಿಸಿಕೊಂಡಿರುವುದು, ಈ ದಿನಮಾನಗಳಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ. ಇಂತಹ ಬದಲಾವಣೆ ಆಂದೋಲನ ಈ ರೀತಿ ಗಟ್ಟಿಯಾಗಿ, ಸಣ್ಣದಾಗಿ ಆರಂಭಗೊಂಡು ವ್ಯಾಪಕತೆ ಪಡೆಯಬೇಕು.</p>.<p>ಎರಡೂವರೆ ಮೂರು ದಶಕಗಳ ಹಿಂದೆ ಚಿತ್ರದುರ್ಗ ಭಾಗದಲ್ಲಿ ಮದ್ಯಪಾನ ವಿರೋಧಿ ಆಂದೋಲನ ನಡೆದಿತ್ತು. ಆ ಕಾರ್ಯದಲ್ಲಿ ಪಾಲ್ಗೊಳ್ಳಲು ಮತ್ತು ಬೆಂಬಲಿಸಲು ಚಿತ್ರದುರ್ಗ ಬೃಹನ್ಮಠದ ಹಿಂದಿನ ಜಗದ್ಗುರುಗಳಿಗೆ ಆಮಂತ್ರಣ ಹೋದಾಗ, ಮದ್ಯಪಾನ ಮಾಡುವ ಭಕ್ತರಿಂದ ಕಾಣಿಕೆ ಸ್ವೀಕರಿಸದೇ ಇದ್ದರೆ ಆಂದೋಲನ ಅರ್ಧ ಯಶಸ್ವಿಯಾದಂತೆ ಎಂದು ಅವರು ಆಯೋಜಕರಿಗೆ ಸಲಹೆ ನೀಡಿದ್ದರು. ಅಂದಿನ ಶ್ರೀಗಳ ಈ ಮಾರ್ಮಿಕ ಸಲಹೆ, ಬರೀ ಮಾತಿನಿಂದ ಏನೂ ಆಗದು, ಅದು ಕೃತಿಗೆ ಬರಬೇಕು ಎಂಬ ಇಂದಿನ ಶ್ರೀಗಳ ಆಶಯದಲ್ಲಿ ಸಮಾಜವನ್ನು ತಿದ್ದುವ ಹೆಬ್ಬಯಕೆ ಇದೆ. ಇದು ತೀವ್ರ ಸ್ವರೂಪ ಪಡೆಯಬೇಕಷ್ಟೇ.</p>.<p><em><strong>-ರುದ್ರಮೂರ್ತಿ ಎಂ.ಜೆ., <span class="Designate">ಚಿತ್ರದುರ್ಗ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಳಲ್ಕೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರು ಹಾಗೂ ಕೊಳ್ಳುವವರಿಗೆ ದಂಡ ವಿಧಿಸಿ, ಈ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುತ್ತಿರುವ ವರದಿ (ಪ್ರ.ವಾ., ಡಿ. 18) ನಿಜಕ್ಕೂ ಆಶ್ಚರ್ಯ ತಂದಿದೆ. ಮದ್ಯಪಾನಮುಕ್ತ ಗ್ರಾಮ ಆಗಬೇಕು ಎಂಬ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಮಾತನ್ನು ಗ್ರಾಮಸ್ಥರು ಕಾರ್ಯರೂಪಕ್ಕೆ ತಂದು ಸೈ ಎನ್ನಿಸಿಕೊಂಡಿರುವುದು, ಈ ದಿನಮಾನಗಳಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ. ಇಂತಹ ಬದಲಾವಣೆ ಆಂದೋಲನ ಈ ರೀತಿ ಗಟ್ಟಿಯಾಗಿ, ಸಣ್ಣದಾಗಿ ಆರಂಭಗೊಂಡು ವ್ಯಾಪಕತೆ ಪಡೆಯಬೇಕು.</p>.<p>ಎರಡೂವರೆ ಮೂರು ದಶಕಗಳ ಹಿಂದೆ ಚಿತ್ರದುರ್ಗ ಭಾಗದಲ್ಲಿ ಮದ್ಯಪಾನ ವಿರೋಧಿ ಆಂದೋಲನ ನಡೆದಿತ್ತು. ಆ ಕಾರ್ಯದಲ್ಲಿ ಪಾಲ್ಗೊಳ್ಳಲು ಮತ್ತು ಬೆಂಬಲಿಸಲು ಚಿತ್ರದುರ್ಗ ಬೃಹನ್ಮಠದ ಹಿಂದಿನ ಜಗದ್ಗುರುಗಳಿಗೆ ಆಮಂತ್ರಣ ಹೋದಾಗ, ಮದ್ಯಪಾನ ಮಾಡುವ ಭಕ್ತರಿಂದ ಕಾಣಿಕೆ ಸ್ವೀಕರಿಸದೇ ಇದ್ದರೆ ಆಂದೋಲನ ಅರ್ಧ ಯಶಸ್ವಿಯಾದಂತೆ ಎಂದು ಅವರು ಆಯೋಜಕರಿಗೆ ಸಲಹೆ ನೀಡಿದ್ದರು. ಅಂದಿನ ಶ್ರೀಗಳ ಈ ಮಾರ್ಮಿಕ ಸಲಹೆ, ಬರೀ ಮಾತಿನಿಂದ ಏನೂ ಆಗದು, ಅದು ಕೃತಿಗೆ ಬರಬೇಕು ಎಂಬ ಇಂದಿನ ಶ್ರೀಗಳ ಆಶಯದಲ್ಲಿ ಸಮಾಜವನ್ನು ತಿದ್ದುವ ಹೆಬ್ಬಯಕೆ ಇದೆ. ಇದು ತೀವ್ರ ಸ್ವರೂಪ ಪಡೆಯಬೇಕಷ್ಟೇ.</p>.<p><em><strong>-ರುದ್ರಮೂರ್ತಿ ಎಂ.ಜೆ., <span class="Designate">ಚಿತ್ರದುರ್ಗ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>