ಈ ಯೋಜನೆ ಪ್ರಕಟವಾದೊಡನೆ ‘ಇದು ಬಡ ರೈತನಿಗೆ ದಿನಕ್ಕೆ ಕೇವಲ ₹ 17 ಹಂಚುವ ಔದಾರ್ಯ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೇಲಿ ಮಾಡಿದ್ದರು. ಆದರೆ ಇದುವರೆಗೂ ಏನೂ ಇರದಿದ್ದ ರೈತನಿಗೆ ಈಗ ಇಷ್ಟಾದರೂ ಸಿಕ್ಕಿತಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಹೇಗೆ ಸಹಿಸಿಯಾರು? ರಾಜಕೀಯವೇ ಹಾಗೆ. ಮತ ಗಳಿಕೆಗೆ ಚ್ಯುತಿ ಬಂತಲ್ಲಾ ಎನ್ನುವ ವ್ಯಸನ ಕಾಂಗ್ರೆಸ್ಸಿಗಾದರೆ, ತನಗೆ ಇನ್ನಷ್ಟು ಮತ ದಕ್ಕೀತೇ ಎನ್ನುವ ಕಾತರ ಬಿಜೆಪಿಗೆ. ಪಕ್ಷಗಳು ಮಾಡುವುದೇ ಮತಗಳಿಗಾಗಿ, ಅಧಿಕಾರದ ಸವಿ ಸವಿಯಲಿಕ್ಕಾಗಿ. ಈ ಪೈಪೋಟಿಯಲ್ಲಿ ಬಡ ರೈತನಿಗೆ ಒಂದಷ್ಟು ದಕ್ಕಿದರೆ ದಕ್ಕಲಿ. ಅಲ್ಲದೆ, ಪ್ರತಿವರ್ಷ ಅರ್ಹ ರೈತನ ಖಾತೆಗೆ ಜಮಾ ಆಗುವ ರೊಕ್ಕ ಇದು. ಬರುವ ವರ್ಷಗಳಲ್ಲಿ ಈ ಮೊತ್ತ ಹೆಚ್ಚಾಗಬಹುದು. ಯಾಕೆ ಸಿನಿಕರಾಗಬೇಕು?