ಪ್ರಸಕ್ತ ಕಾಲಮಾನದ ರಾಜಕಾರಣದಲ್ಲಿ ಕೇವಲ ಅಧಿಕಾರ ಗಳಿಕೆ, ಹಣ ಗಳಿಕೆಯೇ ವ್ಯಕ್ತಿಗತ ರಾಜಕಾರಣದ ಗುರಿ ಆಗಿರುವುದನ್ನು ಎಲ್ಲ ಹಂತಗಳಲ್ಲೂ ಕಾಣುತ್ತಿದ್ದೇವೆ. ನಮ್ಮ ಜನನಾಯಕರಲ್ಲಿ ಸಾಮಾಜಿಕ ಏಳಿಗೆಗೆ ಅಗತ್ಯವಾಗಿ ಇರಬೇಕಾದ ಸೇವಾ ಮನೋಭಾವ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಪ್ರಸಕ್ತ ನಿಲುವು ಆದರ್ಶಪ್ರಾಯವೂ ಆಗಿದೆ.